Saturday 21 April 2012

ಸ್ಲಂ ಚೈಲ್ಡ್



ಸೇವಾಬಸದಿಯ ಮಕ್ಕಳ ವಿಕಾಸಕ್ಕೆ ಕಟಿಬದ್ದವಾಗಿರುವ ಸಂಘಪರಿವಾರಗಳು
ನವೆಂಬರ್ ೧೪ ಮಕ್ಕಳ ದಿನಾಚರಣೆ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂರವರ ಹುಟ್ಟಿದ ದಿನ. ಅವರು ಖಾಸಗಿ ಜೀವನದಲ್ಲಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿರುವುದನ್ನೆ ಗಮನದಲ್ಲಿರಿಸಿ ಮಕ್ಕಳೆಲ್ಲಾ ಸಂಭ್ರಮ ಪಡುವಂತೆ ಮಾಡಿದ್ದಾರೆ ಎಂದು ಸಂತೋಷಪಡಲೆ? ಅವರ ವೈಯಕ್ತಿಕ ಜೀವನದಲ್ಲಿ ಹಾಗೂ ರಾಜಕೀಯ ಜೀವನದಲ್ಲಿ ಯಾರು ಮರೆಯಲಾಗದ ನೋವನ್ನು ಮಾಡಿದ್ದಾರೆ ಎಂದು ಬೇಸರ ಮಾಡಿಕೊಳ್ಳಲೇ?ಆದರೂ ಮಕ್ಕಳನ್ನು ಪ್ರೀತಿಸಿ ಹಾಗೂ ವೈಯಕ್ತಿಕ ವಿಷಯಗಳಲ್ಲಿ ತನ್ನ ಹೆಸರನ್ನು ಸಮಾಜದಲ್ಲಿ ಮರೆಯಾಗದಂತೆ ಮಾಡಿದ್ದಾರೆ. ಅವರ ಹುಟ್ಟಿದ ಹಬ್ಬವನ್ನು ಮಕ್ಕಳ ದಿನವನ್ನಾಗಿ ಆಚರಿಸುವ ನಾವು, ಅವರ ವೈಯಕ್ತಿಕ ಜೀವನದಲ್ಲಿ ಪರರ ಹೆಂಡತಿಯನ್ನು ಕಾಮದೃಷ್ಟಿಯಿಂದ ನೋಡಿದ ಹಾಗೂ ಸೈನ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಮಹತ್ವದ ಸ್ಥಾನವನ್ನು ನೀಡಿ, ಹಿಂದು ಬಾಂದವರನ್ನು ತುಚ್ಚವಾಗಿ ನೋಡಿದ ನೆಹರೂ ಅವರು ಮಕ್ಕಳಿಗೆ ಪ್ರೇರಣೆ ಆಗುವುದಕ್ಕೆ ಸಾಧ್ಯವಿದೆಯೇ? ಹಾಗೂ ಪ್ರಸ್ತುತ ಸಮಾಜದಲ್ಲಿ ಎಲ್ಲಾ ಮಕ್ಕಳಿಗೂ ಸಮಾನವಾದ ಸ್ಥಾನಮಾನ ಸಿಗುತ್ತಿದೆಯೇ ಎಂದಾಗ ಉತ್ತರ ಮಾತ್ರ ಶೂನ್ಯ.....
ಮಕ್ಕಳ ದಿನಾಚರಣೆ ಬಂದರೆ ಸಾಕು ಎಲ್ಲಾ ಪತ್ರಿಕೆಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹಿರಾತುಗಳು ಪ್ರಸಾರವಾಗುತ್ತದೆ. ಪುಟಾಣಿ ಮಕ್ಕಳ ವೇಷದ ಸ್ಪರ್ಧೆ, ಚಿತ್ರ ಬಿಡಿಸುವುದು, ಹಾಡು, ನೃತ್ಯ, ಭಾಷಣ ಒಂದೆ ಎರಡೇ ಅನೇಕ ಸ್ಫರ್ಧೆಗಳನ್ನು ವಿವಿಧ ಸಂಸ್ಥೆಗಳು ಆಯೋಜಿಸುತ್ತವೆ. ಮಕ್ಕಳಿಂದ ಹಿಡಿದು ಎಲ್ಲಾ ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕ ವಲಯದಲ್ಲೂ ಕೂಡ ಇಂತಹ ಸ್ಫರ್ದೆಗಳನ್ನು ಎರ್ಪಡಿಸುವುದು ಸರ್ವೇ ಸಾಮಾನ್ಯ. ಅವರ ಕಂಪೆನಿಯು ಸಮಾಜದಲ್ಲಿ ಹೆಸರು ಗಳಿಸಬೇಕೆನ್ನುವ ಸ್ವಾರ್ಥ ಇದರಲ್ಲಿದ್ದರೂ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸುವುದಕ್ಕೆ ಭದ್ರ ಬುನಾದಿಯಾಗುವುದರಲ್ಲಿ ಸಂದೇಹವಿಲ್ಲಾ. ವಿವಿಧ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡಿ, ಅವರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬಹುಮಾನವನ್ನು ಕೊಟ್ಟು ಸತ್ಕರಿಸುತ್ತಾರೆ. ಬಹುಮಾನ ಪಡೆದ ಮಕ್ಕಳು ಸಂತೋಷ ಪಟ್ಟರೆ, ಬಹುಮಾನ ಪಡೆಯದ ಮಕ್ಕಳು ಮಾತ್ರ ಭಾಗವಹಿಸಿದ ತೃಪ್ತಿ ಇದ್ದರೂ, ಬಹುಮಾನ ಸಿಗಲಿಲ್ಲ ಎನ್ನುವ ಹತಾಶ ಭಾವನೆ ಮೂಡುವುದು ಸಹಜ. ನೆಹರೂರವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವ ನ.೧೪ ದೇಶದಲ್ಲಿರುವ ಎಲ್ಲಾ ಮಕ್ಕಳು ಆ ಸಂತೋಷ ಸಮಾರಂಭದಲ್ಲಿ ಪಾಲ್ಗೊಳ್ಳುವ ಭಾಗ್ಯ ಸಿಗುತ್ತಿದೆಯೇ ಎನ್ನುವುದು ಪ್ರಶ್ನೆಯಾಗಿದೆ.
ಶಾಲೆಯಲ್ಲಿ ವಿಶೇಷವಾಗಿ ಮಕ್ಕಳ ದಿನಾಚರಣೆಯಂದು ಬೌದ್ದಿಕ ಹಾಗೂ ಕ್ರಿಯಾತ್ಮಕ ಚಟುವಟಿಕೆಯೊಂದಿಗೆ ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಆಟೋಟ ಸ್ಪರ್ಧೆಯನ್ನು ಆಯೋಜಿಸಿರುತ್ತಾರೆ. ಹಳ್ಳಿಯ ಶಾಲೆಯಲ್ಲಂತೂ ಮಕ್ಕಳಿಗೆ ಆಟವೇ ಪ್ರಧಾನವಾಗಿರುತ್ತದೆ. ಆಂಗ್ಲ ಭಾಷೆಯೆ ಮುಖ್ಯವೆಂದು ಅದರ ಬೆನ್ನತ್ತಿ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ನಾವು ಕೂಡ ನಿಮ್ಮಷ್ಟೆ ಸಮರ್ಥರು ಎಂದು ಜಗಜ್ಜಾಹಿರ ಗೊಳಿಸಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಮುನ್ನುಗ್ಗುತ್ತಾ, ದಾಖಲೆಯನ್ನೇ ನಿರ್ಮಿಸುತ್ತಿದ್ದಾರೆ. ಕ್ರೀಡೆ, ಬೌದ್ದಿಕ ಹಾಗೂ ಸಾಂಸ್ಕೃತಿಕ ಯಾವುದೇ ಕ್ಷೇತ್ರವಿರಲಿ ನಮ್ಮಲ್ಲಿ ಕೂಡ ವಿರಾಟ ಶಕ್ತಿಯಿದೆ ಎಂದು ತೋರಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿಯೂ ಕೂಡ ವಿಶೇಷವಾದ ಶಕ್ತಿ ಇದೆ ಎಂದು ನಿರ್ದೇಶಕ ಕಿಶನ್, ರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ ಹೆಸರು ಮಾಡಿದ ಉಮಾಭಾಗ್ಯಲಕ್ಷ್ಮೀ , ಹಾಡುಗಾರಿಕೆಯಲ್ಲಿ ಪಲ್ಲವಿ ಪ್ರಭು ಹಾಗೂ ನೃತ್ಯದಲ್ಲಿ ಜ್ಞಾನ ಐತಾಳ ಹೀಗೆ ಅನೇಕ ಪುಟಾಣಿಗಳ ಸಾಧನೆ ಮೆಚ್ಚುವಂಥದ್ದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂಭಾಷಣೆಯ ಚತುರತೆ ಇಲ್ಲದಿದ್ದರೂ ಸಾಧನೆ ಮಾತ್ರ ಗಣನೀಯವಾದುದು.
ಆ ನಿಟ್ಟಿನಲ್ಲಿ ಅನೇಕ ಪತ್ರಿಕೆಗಳು ಹಾಗೂ ನಮ್ಮ ಪತ್ರಿಕೆ ಶನಿವಾರ ಪುಟಾಣಿಗಳಿಗಾಗಿಯೇ ಪುರವಣಿಯನ್ನು ಪ್ರಸಾರ ಮಾಡುತ್ತಿದ್ದು, ಮಕ್ಕಳಿಗೆ ವಿಶಿಷ್ಟ ವೇದಿಕೆಯೊಂದನ್ನು ನಿರ್ಮಾಣ ಮಾಡುತ್ತಿದೆ ಎಂದು ಸಂತೋಷಪಡುವ ಹಾಗಿಲ್ಲ? ಸುಪ್ತ ಮನಸ್ಸುಗಳ ವಿಶಿಷ್ಟ ತೆರನಾದ ಭಾವ ಪ್ರಪಂಚದಲ್ಲಿರುವ ಕ್ಲಪ್ತವಾಗಿರುವ ಪ್ರತಿಭೆಯನ್ನು ಪ್ರಚುರ ಪಡಿಸಲು ಸಂಘಸಂಸ್ಥೆಗಳು ವೇದಿಕೆ ಒದಗಿಸಿವೆ ಎಂದು ಸಂತೋಷ ಪಡುವುದಕ್ಕೆ ಹೇಗೆ ಸಾಧ್ಯ....
ದೇಶದ ಅನೇಕ ನಗರಗಳ ಸೇವಾಬಸದಿಗಳಲ್ಲಿ ಅನೇಕ ಅರಳುವ ಕಂಗಳು ಸೂಕ್ತ ವೇದಿಕೆ ಸಿಗದೆ ಕಣ್ಣೀರಿನಲ್ಲಿ ದಿನದೂಡುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಶಾಲೆಯ ಮೆಟ್ಟಿಲನ್ನು ತುಳಿಯಲು ಸಾಧ್ಯವಿಲ್ಲದೇ ಕಡುಬಡತನದಲ್ಲಿ, ಬದುಕುವುದಕ್ಕಾಗಿ ಬಿಕ್ಷೆ ಬೇಡುತ್ತಾ ಶಾಲೆಗೆ ಹೋಗುವ ಮಕ್ಕಳನ್ನು ಆಸೆಯ ಕಂಗಳಿಂದ ನೋಡುತ್ತಿರುವ ಮಕ್ಕಳಿಗೆಲ್ಲಿ ಸ್ವಾಮೀ ಸಂತೋಷದ ಆಚರಣೆ.ಸೇವಾ ಬಸದಿಯಲ್ಲಿರುವ ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸಲೂ ಶ್ರಮಿಸುವ ಸಂಘಸಂಸ್ಥೆಗಳಿದ್ದರೂ, ಮಕ್ಕಳೂ ಮಾತ್ರ ಬಡತನದ ಕರಿಛಾಯೆಯಲ್ಲಿ ಜೀವನ ನಡೆಸುತ್ತಿದ್ದಾರೆ.ಆ ಮಕ್ಕಳಿಗೂ ನಾನು ಉಳಿದ ಮಕ್ಕಳಂತೆ ಶಾಲೆಗೆ ಹೋಗಬೇಕೆನ್ನುವ ತುಡಿತ ಇರುವುದಿಲ್ಲವೇ? ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಯಾವುದೋ ಅದ್ಬುತ ಶಕ್ತಿ ಇರಬಹುದು ಎಂದು ಭಾಸವಾಗುವುದಿಲ್ಲವೇ? ಬೀದಿಯಲ್ಲಿ ಸ್ವತಂತ್ರವಾಗಿ ಅಲೆದಾಡಿಕೊಂಡಿದ್ದ ಮಕ್ಕಳಿಗೆ ಸ್ವಲ್ಪದಿನ ಸ್ವಾತಂತ್ರ್ಯ ಕಸಿದುಕೊಂಡಂತಾಗುತ್ತದೆ.
ಸೇವಾ ಬಸದಿಗಳು ಎಂದು ನಾವು ಯಾವುದನ್ನು ಕರೆಯುತ್ತೆವೋ ಅಲ್ಲಿರುವಂಥ ಮಕ್ಕಳನ್ನು ಸಮಾಜದಲ್ಲಿ ದುಷ್ಟಕೃತ್ಯಗಳಿಗೆ ತಮ್ಮ ದಾಳವನ್ನಾಗಿ ಬಳಸುತ್ತಾರೆ. ವಿದ್ಯೆಯ ಗಂಧ ಗಾಳಿಯೇ ತಿಳಿಯದ ಮಕ್ಕಳು ಅವರು ಹೇಳಿದ ಸಮಾಜಘಾತುಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರು ನೀಡಿದ ಆಮಿಷಗಳಿಗೆ ಬಲಿಯಾಗಿ ಅಮೂಲ್ಯ ಜೀವನವನ್ನು ನಾಶಮಾಡಿಕೊಳ್ಳುತ್ತಾರೆ. ಮಕ್ಕಳ ತಂದೆ ತಾಯಿ ಕುಡಿತಕ್ಕೆ ದಾಸರಾಗಿರುವುದರಿಂದ ಸುಲಭವಾಗಿ ಅವರನ್ನು ವಂಚಿಸಬಹುದು. ಸಣ್ಣ ಮಕ್ಕಳು ಲೇಖನಿ ಹಿಡಿಯಬೇಕಾದ ಕೈಯಲ್ಲಿ ಗಾಂಜಾ, ಅಫಿಮು, ಚರಸ್‌ನಂಥ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಚಕ್ರವ್ಯೂಹದಲ್ಲಿ ಸಿಕ್ಕಿ ಹೊರಬರಲಾರದೆ ವಿಲವಿಲ ಒದ್ದಾಡುತ್ತಿದ್ದಾರೆ. ಮೊದಲು ಸಣ್ಣ ದೇಶ ವಿರೋದಿ ಚಟುವಟಿಕೆಯಲ್ಲಿ ತೊಡಗಿದ ಮಕ್ಕಳು, ಬೆಳೆದು ದೊಡ್ಡವರಾದಾಗ, ಜೀವನದಲ್ಲಿ ಗುರಿಯಿಲ್ಲದೆ, ಬೇರೆ ದಾರಿ ಕಾಣದೆ ಆ ನರಕದಲ್ಲಿ ಬದುಕನ್ನು ಸವೆಸುತ್ತಿರುತ್ತಾರೆ. ಮುಂದೊಂದು ದಿನ ತಮ್ಮ ಜೀವನ ಮೃತ್ಯುಕೂಪದಲ್ಲಿ ಬೀಳುತ್ತವೆ ಎಂದು ತಿಳಿಯುವುದರೊಳಗೆ ಕಾಲ ಕೈ ಮೀರಿ ಹೋಗಿರುತ್ತೆ? ರೈಲು ಹೋದ ಮೇಲೆ ಟಿಕೆಟ್ ಖರೀದಿ ಮಾಡಿದರೆ ಏನು ಪ್ರಯೋಜನ? ಕೆಲವೊಂದು ಕಾಯಿಲೆಗೆ ಪ್ರಾರಂಭದಲ್ಲಿಯೇ ಔಷಧಿ ಮಾಡಿದರೆ ನಿವಾರಿಸಬಹುದು ಅಥವಾ ರೋಗದ ಪ್ರಖರತೆಯನ್ನು ಹತೋಟಿಗೆ ತರಬಹುದು. ಮಾದಕ ವಸ್ತುಗಳು ಮಕ್ಕಳ ಕೈಯಲ್ಲಿ ಸಾರಾಸಗಾಟಾಗಿ ಓಡಾಡುವಾಗ, ಲೇಖನಿಯು ಕೂಡ ಚಲಿಸಬಹುದಲ್ಲವೇ? ಕ್ರಿಶ್ಚಿಯನ್ ಸಮುದಾಯ ಇಂತಹ ಕುಟುಂಬಗಳನ್ನೆ ಗುರಿಯಾಗಿಸಿ, ಮತಾಂತರ ಮಾಡಿದ ಘಟನೆಗಳು ಸಾಕಷ್ಟಿವೆ.
ಮನೆಯ ಬಡತನ, ತಂದೆ ತಾಯಿಯ ಕಿರುಕುಳ, ಮಾನಸಿಕ ಬೆಳವಣಿಗೆಯ ಕೊರತೆ, ಅನಕ್ಷರತೆ, ಅತಿಯಾಸೆ ಹೀಗೆ ಅನೇಕ ಸಮಸ್ಯೆಗಳಿಂದ ಮಕ್ಕಳು ಸಮಾಜ ಘಾತುಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತವೆ. ಕೇವಲ ಮಕ್ಕಳನ್ನು ಮಾತ್ರ ದೂರಿದರೆ ಸಾಲದು. ಪರೋಕ್ಷವಾಗಿ ಸಮಾಜವು ಕೂಡ ಮಕ್ಕಳನ್ನು ಆ ಮಾನಸಿಕತೆಯಲ್ಲಿ ಬೆಳೆಯುವ ಹಾಗೆ ಮಾಡುತ್ತವೆ. ಖಟ್ಚಜಿಛಿಠಿqs mಛಿmZಛಿo ಠಿeಛಿ ಜಿಞಛಿ, ಠಿeಛಿ ಜಿಞಜ್ಞಿZ ಟಞಞಜಿಠಿo ಜಿಠಿ ಎಂದು ಹೆನ್ರಿ ಥೋಮಸ್ ಹೇಳುತ್ತಾನೆ. ಕಳ್ಳತನ ಮಾಡುವುದು, ಮಾದಕ ವಸ್ತುಗಳ ಮಾರಾಟ ಒಂದು ಸಮಸ್ಯೆಯಾದರೆ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಗಾಂಜಾ, ಡ್ರಗ್ಸ್ , ಕುಡಿತದ ದಾಸರಾಗುತ್ತಿದ್ದಾರೆ. ಗಂಡು ಮಕ್ಕಳು ಈ ರೀತಿಯಾಗಿ ಜೀವನ ಹಾಳುಮಾಡಿಕೊಳ್ಳುತ್ತಿದ್ದರೆ ಪಾಪ ಹೆಣ್ಣು ಮಕ್ಕಳ ಸ್ಥಿತಿ ಇನ್ನಷ್ಟೂ ಶೋಚನೀಯವಾಗಿದೆ. ಅಪ್ರಾಪ್ತ ಬಾಲೆಯರು ಕಾಮಾಂಧರ ಭೋಗದ ವಸ್ತುಗಳಾಗಿ, ಕೊಲೆಯಾಗಿ ಈ ಲೋಕದಿಂದಲೇ ಬೆರ್ಪಡುತ್ತಿದ್ದಾರೆ. ಮೈಕಲ್ ಜಾಕ್ಸನ್ ಕಾಮತೃಷೆಯನ್ನು ತೀರಿಸಿಕೊಳ್ಳಲು ಅಪ್ರಾಪ್ತೆಯರನ್ನೆ ಬಳಸುತ್ತಿದ್ದ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ.. ಮುಂಬೈನ ಅಂದೇರಿಯಲ್ಲಿ ವಾಸವಾಗಿದ್ದ ಮಧ್ಯಮ ವರ್ಗದ ಹೆಣ್ಣಿನ ಮೇಲಾದ ಲೈಂಗೀಕ ದೌರ್ಜನ್ಯವನ್ನು ಕಂಡಾಗ, ನಮ್ಮ ದೇಶದಲ್ಲಿಯೂ ಕೂಡ ಮೈಕಲ್‌ನಂಥ ಕಾಮಾಸುರರು ಬೇಕಾದಷ್ಟಿದ್ದಾರೆ. ಲೈಂಗೀಕ ದೌರ್ಜನ್ಯ ಒಂದೆಡೆಯಾದರೆ ವಾಮಾಚಾರವೆಂಬ ಮಾಯೆಗೆ ಬಲಿಯಾಗಿ ಪುಟಾಣಿಗಳನ್ನೆ ಬಲಿಕೊಡುವಂಥ ಕಟುಕರು ಸಮಾಜದಲ್ಲಿ ಇದ್ದಾರೆ.
ನಮ್ಮ ದೇಶದಲ್ಲಿರುವ ಮಕ್ಕಳ ಸಮಾಜ ವಿರೋಧಿ ಚಟುವಟಿಕೆಯನ್ನು ಘೆZಠಿಜಿಟ್ಞZ ಇಜಿಞಛಿ ಛ್ಚಿಟ್ಟbo ಆಛಿಟ(ಘೆಇಆ) ವರದಿ ಮಾಡಿದೆ. ಜೈಪುರದಲ್ಲಿ ೩೬೯ ಕ್ರೈಮ್ ಮತ್ತು ಬಲಾತ್ಕಾರ ದೂರುಗಳು ದಾಖಲಾಗಿದೆ. ರಾಜ್ಯಗಳಲ್ಲಿ ರಾಜಸ್ತಾನ-೧೩೧೮, ಮಧ್ಯಪ್ರದೇಶ-೪೯೧೨, ಮಹಾರಾಷ್ಟ್ರ-೩೬೨೪, ಉತ್ತರ ಪ್ರದೇಶ-೨೩೩೨ ದೂರುಗಳಿವೆ. ರಾಜ್ಯದ ರಾಜಧಾನಿಗಳಲ್ಲಿ ೨೦೧೦ರ ವರದಿಯಂತೆ ಬಾಂಬೆ-೫೩೨, ಪುಣೆ-೩೫೩, ಇಂದೋರ್-೩೨೫, ವಿಜಯ್‌ವಾಡಾ-೧೮೮, ಲಥೈನ್-೧೫೦, ಬೋಪಾಲ್-೧೧೧, ಜೈಪುರ-೯೮ ಬಲಾತ್ಕಾರ ದೂರುಗಳು ದಾಖಲಾಗಿದೆ. ೧೫-೨೯ ವರ್ಷದೊಳಗಿನ ಆತ್ಮಹತ್ಯೆ ಪ್ರಕರಣಗಳು ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ೬೫೭ ಪ್ರಕರಣಗಳಲ್ಲಿ ೩೨೯ ಮಹಿಳೆಯರು, ದೆಹಲಿ-೬೫೧, ಮುಂಬೈ-೫೮೨, ಚೆನೈ-೪೭೨ ಈ ರೀತಿಯಾಗಿ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸ್ವಲ್ಪ ತಿಳುವಳಿಕೆ ಇರುವ ಮಕ್ಕಳೇ ಆತ್ಮಹತ್ಯೆಗೆ ಮುಂದಾದರೆ, ವಿದ್ಯೆ ಕಲಿಯದ ಸೇವಾಬಸದಿಯ ಮಕ್ಕಳ ಗತಿಯೇನು?
ಸೇವಾ ಬಸದಿಯಲ್ಲಿರುವ ಮಕ್ಕಳಿಗೆ ಹಾಗು ಬಡತನದಲ್ಲಿರುವ ಮಕ್ಕಳಿಗೆ ವಿದ್ಯೆ ಕಲಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸೇವಾಸಂಸ್ಥೆಗಳು ಶ್ರಮಿಸುತ್ತಿವೆ. ೧೯೮೦ರ ದಶಕದಲ್ಲಿ ಒರಿಸ್ಸಾದಲ್ಲಿ ಫ್ಲಾಟ್‌ಫಾರಂ ಶಾಲೆಗಳು ಪ್ರಾರಂಭವಾದವು. ನಿವೃತ್ತ ಸೇನಾಧಿಕಾರಿಯ ಪತ್ನಿ ಇಂದರ್‌ಜಿತ್ ಖುರಾನ ರುಚಿಕಾ ಸೋಷಿಯಲ್ ಸರ್ವಿಸ್ ಆರ್ಗನೈಜೇಷನ್ ಪ್ರಾರಂಭ ಮಾಡಿದರು. ಈಗ ಆ ಸಂಸ್ಥೆ ೮೨೦ ಫ್ಲಾಟ್‌ಫಾರಂ ಶಾಲೆಗಳು, ೭೫ ಸೇವಾ ಬಸದಿ ಶಾಲೆ, ೨೫ ನರ್ಸರಿ ಶಾಲೆಗಳನ್ನು ಯಾವುದೇ ಸ್ವಾರ್ಥವಿಲ್ಲದೆ ಯಶಸ್ವಿಯಾಗಿ ನಡೆಸುತ್ತಿದೆ. ನಮ್ಮ ಭೂಮಿ, ಹಿಂದೂ ಸೇವಾ ಪ್ರತಿಷ್ಠಾನದ ನೆಲೆ, ವಿಶ್ವಹಿಂದೂ ಪರಿಷತ್ತಿನ ವನಿತಾಶ್ರಮ ಹಾಗು ಕುತ್ತಾರು ಆಶ್ರಮದಲ್ಲಿ ಅನೇಕ ನಿರಾಶ್ರಿತ ಮಕ್ಕಳು ತಮ್ಮ ಜೀವನವನ್ನು ಸಾರ್ಥಕ್ಯ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರಸ್ತುತ ಸಮಾಜದಲ್ಲಿ ಕ್ರಿಶ್ಚಿಯನ್ ಸಮುದಾಯದವರು ನಾವು ಸೇವೆ ಮಾಡುತ್ತೇವೆ ಎನ್ನುವ ಕವಚ ದರಿಸಿದ್ದರೂ, ಮತಾಂತರವನ್ನೇ ಗುರಿಯಾಗಿಸಿ ಸ್ವಾರ್ಥವನ್ನು ಸಾಧಿಸುತ್ತಿದ್ದಾರೆ.
ಸರ್ಕಾರದಿಂದ ಮಕ್ಕಳ ವಿಕಾಸಕ್ಕೆಂದೇ ಹಲವಾರು ಕ್ರಮಗಳು, ಸ್ವಯಂಸೇವಾ ಸಂಸ್ಥೆಗಳು, ಅಂಗನವಾಡಿಗಳು ಶಾಲಾಪೂರ್ವ ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡುತ್ತವೆ. ೧೯೫೨ರಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಸಂಸ್ಥೆಯನ್ನು ಅದರಡಿಯಲ್ಲಿ ಬಾಲವಿಕಾಸ ಕೇಂದ್ರ ಹಾಗೂ ೧೯೫೫ ಮಕ್ಕಳ ಕಲ್ಯಾಣವನ್ನೇ ಗುರಿಯಾಗಿಸಿ ರಾಷ್ಟ್ರೀಯ ಮಕ್ಕಳ ಮಂಡಳಿಯನ್ನು ಪ್ರಾರಂಭಮಾಡಿದೆ. ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣ ಮಾಡಲಾಗಿದೆ. ಸಂವಿಧಾನದಲ್ಲಿ ೧೪,೧೫,೧೬ನೇ ವಿಧಿಗಳು ಸಾರ್ವಜನಿಕ ಹುದ್ದೆಗಳಲ್ಲಿ ಸ್ತ್ರೀ ಪುರುಷರಿಗೆ ಸಮಾನ ಅವಕಾಶ ಕಲ್ಪಿಸಿ, ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡಿದೆ. ಇಷ್ಟೆಲ್ಲಾ ವ್ಯವಸ್ಥೆಗಳು ಸರ್ಕಾರದಲ್ಲಿದ್ದರೂ ದುಷ್ಟಕೃತ್ಯಗಳಲ್ಲಿ ಭಾಗವಹಿಸುವುದು ಮಿತಿಮಿರುತ್ತಿದೆ.
ಸರ್ಕಾರದ ಈಗಿನ ಶಾಲೆಗಳ ವಿಲೀನಿಕರಣ ನೀತಿಯಿಂದ ಬಡಮಕ್ಕಳು ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸವಿಲ್ಲದೆ ಪಶ್ಚಾತ್ತಾಪ ಪಡುವ ಸಮಯ ದೂರವಿಲ್ಲ. ಅದಕ್ಕಾಗಿ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೂ ಅಲ್ಲಿಯೂ ಕೂಡ ಬುದ್ದಿಜೀವಿಗಳ ಕೊಂಕು ಮಾತುಗಳಿಗೆ ಗುರಿಯಾಗಬೇಕಾಗುತ್ತದೆ. ಮತಾಂತರ ಮಾಡುವ ಗುರಿಯಿರಿಸಿ, ಸ್ವಾರ್ಥಸಾಧಿಸುವ ಕ್ರಿಶ್ಚಿಯನ್ ಸಮುದಾಯಕ್ಕೆ ಸಮಾಜದಲ್ಲಿ ಮನ್ನಣೆ ಸಿಗುತ್ತಿದೆ. ಯಾವುದೇ ಸ್ವಾರ್ಥಾಪೇಕ್ಷೆಯಿಲ್ಲದೆ ೮೬ ವರ್ಷಗಳಿಂದ ಸಾವಿರಾರು ಸೇವಾಚಟುವಟಿಕೆಯನ್ನು ಮಾಡುತ್ತಾ ಬಂದಿರುವ ಸಂಘಪರಿವಾರಗಳಿಗೆ ಕೋಮುಸಂಘಟನೆ ಎನ್ನುವ ಪಟ್ಟ ಇದು ಯಾವ ನ್ಯಾಯ? ಹಿಂದು ಸಮಾಜದ ಬಂದುಗಳಿಗೆ ನೆಲೆಯನ್ನು ಕಲ್ಪಿಸಬೇಕು ಹಾಗೂ ಭವ್ಯಭಾರತದ ನಿರ್ಮಾಣ ಮಾಡಬೇಕೆನ್ನುವ ಮನೋಭಿಲಾಷೆ ಕೋಮುವಾದಕ್ಕೆ ಎಲ್ಲಿಯಾದರೂ ಆಸ್ಪದ ಕೊಡುತ್ತದೆಯೇ? ಬಸದಿಯಲ್ಲಿರುವ ಮಕ್ಕಳಿಗೂ ವಿದ್ಯಾಭ್ಯಾಸ ಮಾಡಿಸಿ ಸತ್ಪ್ರಜೆಗಳನ್ನಾಗಿ ಮಾಡಬೇಕೆನ್ನುವ ಸಂಘದ ಆಸೆ vಪ್ಪಾಗುತ್ತದೆಯೇ?
-ಸಂದೇಶ ಶೆಟ್ಟಿ ಆರ್ಡಿ-೯೯೮೦೬೨೧೮೧೦

No comments:

Post a Comment