Monday 23 April 2012

ಸ್ಕೂಲ್ ಟೈಮ್


ಮಧ್ಯಂತರ ರಜೆ ಕಳೆದು ಮತ್ತೆ ಪ್ರಾರಂಭವಾಯ್ತು ಶಾಲೆ
ಎಲ್ಲಾ ಕಡೆಯೂ ದೀಪಾವಳಿಯ ಸಂಭ್ರಮ, ಪಟಾಕಿಯ ಸದ್ದು ಒಂದೆಡೆಯಾದರೆ, ಮಕ್ಕಳಿಗೆ ಮಾತ್ರ ಬೇಸರ. ಬೆಳಗಾದರೆ ಶಾಲೆಗೆ ಹೋಗಬೇಕು ಎನ್ನುವ ಆತಂಕ. ಮನೆಯ ಹಿರಿಯರೊಂದಿಗೆ ದೀಪಾವಳಿಯನ್ನು ಆಚರಿಸಿ, ಸವಿನೆನಪುಗಳು ಮಾಸುವುದರೊಳಗೆ, ಮಧ್ಯಂತರ ರಜೆಕಳೆದು ಪುನಃ ಶಾಲೆ ಪ್ರಾರಂಭವಾಯಿತು ಎನ್ನುವ ನಿರಾಸೆ.
ರಜೆಯಲ್ಲಿ ತಂದೆ ತಾಯಿಯ ಮಾತಿಗೆ ಕಿವಿಕೊಡದೆ ಬೆಟ್ಟದ ನೆಲ್ಲಿಕಾಯಿ ಕೊಯ್ಯಲು ಹೋದದ್ದು, ಒಟ್ಟಿಗೆ ನದಿಯಲ್ಲಿ ಈಜಿದ್ದು,ಹೀಗೆ ಅನೇಕ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಮಕ್ಕಳ ಮನದಲ್ಲಿ ಪುನಃ ರಗಳೆ ಪ್ರಾರಂಭವಾಯ್ತಲ್ಲ ಎನ್ನುವ ಭಾವನೆಯಾದರೆ, ತಂದೆ ತಾಯಿ ಮಾತ್ರ ಅಬ್ಬಾ ಎಂದು ನಿಟ್ಟುಸಿರು ಬಿಡುವ ಕಾಲ.ರಗಳೆ ಮುಗಿಯಿತಲ್ಲ ಅಂತೂ ಶಾಲೆ ಪ್ರಾರಂಭವಾಯ್ತಲ್ಲ ಎನ್ನುವ ಪೋಷಕರು. ಸ್ವಚ್ಚಂದವಾಗಿ ಊರಿನ ಸುತ್ತಲೂ ಓಡಾಡುತ್ತಿದ್ದ ಮಕ್ಕಳಿಗೆ ಮಾತ್ರ ಇನ್ನೂ ಸ್ವಲ್ಪ ದಿನ ರಜೆ ಇರಬಾರದೆ ಎನ್ನುವ ಆಸೆ.
ಮಧ್ಯಂತರ ರಜೆ ಕಳೆದು ಶಾಲೆಯಲ್ಲಿ ಮಕ್ಕಳ ಬರನಿರೀಕ್ಷೆಯಲ್ಲಿರುವ ಗುರುಗಳು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಕಳಕಳಿಯನ್ನು ಹೊಂದಿದ್ದಾರೆ ಎನ್ನುವುದು ಸ್ಪಷ್ಟ. ಮಕ್ಕಳಿಗೆ ರಜೆ ನೀಡಿದ್ದರೂ ತಾವು ಮಾತ್ರ ಮಕ್ಕಳ ಸರ್ವತೋಮುಖ ಏಳ್ಗೆಗಾಗಿ ಶ್ರಮಿಸಿ,ಅವರ ಜೀವನದಲ್ಲಿ ತಮ್ಮ ಪ್ರಭಾವವನ್ನು ಬೀರಿ, ಸುಂದರ ಜೀವನವನ್ನು ಹಾಗೂ ಶಾಲೆಯ ಕೀರ್ತಿಯನ್ನು ಏರಿಸುವ ಹೇಗೆ ಎನ್ನುವ ದೃಷ್ಟಿಯಿಂದಲೇ ಬಂದಿರುತ್ತಾರೆ.
ಆದರೆ ಇಷ್ಟು ವರ್ಷದವರೆಗೆ ಇದ್ದ ಮಧ್ಯಂತರ ರಜೆ ಈ ವರ್ಷದ್ದಾಗಿಲ್ಲ. ಇಷ್ಟರವರೆಗೆ ಬೇಸಗೆಯ ಬಿಸಿಲಿನಂತೆ ಸೂರ್ಯದೇವ ಮಕ್ಕಳನ್ನು ಆಗಮನ ಮಾಡಿದರೆ, ಈ ವರ್ಷ ಸೂರ್ಯನಿಗೆ ವಿಶ್ರಾಂತಿಯನ್ನು ನೀಡಿ ವರುಣದೇವ ಕಾರ್ಯ ನಿರ್ವಹಿಸುತ್ತಿದ್ದಾನೆ.
ಎನೇ ಇರಲಿ ಮಕ್ಕಳು ಮಾತ್ರ ಮೂಲೆಯಲ್ಲಿಟ್ಟ ಭಾರದ ಪುಸ್ತಕದ ಮೂಟೆಯನ್ನು ಹೊತ್ತು ಶಾಲೆಗೆ ಹೊರಡುವಾಗ ಮಾತ್ರ ಬೈಯ್ಯುವುದು ಸುಳ್ಳಲ್ಲ..ಆದಷ್ಟೂ ಬೇಗ ಬರಲಿ ಬೇಸಗೆಯ ರಜೆ ಎನ್ನುತ್ತಾ ಶಾಲೆಗೆ ಹೋಗುವ ಸಂಭ್ರಮ ಮಕ್ಕಳ ಮನದಲ್ಲಿ....

No comments:

Post a Comment