Monday 23 April 2012




ಉಡುಪಿಯಲ್ಲಿ ಭವಿತವ್ಯದ ಭಾರತ ನಿರ್ಮಾಣಕ್ಕಾಗಿ ಸಿಂಹಿಣಿಯರ ಸ್ವಾಭಿಮಾನದ ಘರ್ಜನೆ
೧೯೩೬ರಲ್ಲಿ ಮಹಾರಾಷ್ಟ್ರದ ವಾರ್ದಾದಲ್ಲಿ ಪ್ರಾರಂಭವಾದ ರಾಷ್ಟ್ರಸೇವಿಕಾ ಸಮಿತಿಗೆ ಈಗ ೭೫ನೇ ವರ್ಷದ ಸಂಭ್ರಮ.ಆ ನಿಟ್ಟಿನಲ್ಲಿ ಗಂಡು ಹೆಣ್ಣು ಎಂಬ ಬೇಧ ಭಾವವನ್ನೆ ತೋರದ ಉಡುಪಿ ಜಿಲ್ಲೆಯಲ್ಲಿ ಆದ ಪ್ರಶಿಕ್ಷಣಾ ವರ್ಗ ಹೆಮ್ಮೆಯ ವಿಚಾರವಾಗಿದೆ. ``ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತೇ`` ಸಮಾಜದಲ್ಲಿ ಪುರುಷರಷ್ಟೇ ಪ್ರಬಲರಾಗಬೇಕು ಎನ್ನುವ ದೃಷ್ಟಿಕೋನದಿಂದ ರಾಷ್ಟ್ರಸೇವಿಕಾ ಸಮಿತಿಯ ನಿರ್ಮಾಣ ಮಾಡಿದವರು ಮಾತಾಜಿ ಮೋಶಿಜಿಯವರು.ಹೆಣ್ಣು ಅಬಲೆ, ಸಬಲೆಯಲ್ಲ ಎನ್ನುವ ಕೀಳರಿಮೆ ಪುರುಷ ಪ್ರಧಾನ ಸಮಾಜದಲ್ಲಿದ್ದ ಹೊತ್ತಿನಲ್ಲಿ ,ಹೆಣ್ಣು ಸಬಲೆ,ಅವಳಿಗೂ ಸಮಾಜದಲ್ಲಿ ಒಂದು ಉನ್ನತವಾದ ನೆಲೆಯಿದೆ,ಸ್ಥಾನಮಾನವಿದೆ ಎನ್ನುವ ಅಭಿಲಾಷೆ,ಅದನ್ನು ಗಳಿಸುವ ನಿಟ್ಟಿನಲ್ಲಿ ಪ್ರಾರಂಭವಾದುದರ ಫಲರೂಪವೇ ಸಮಿತಿ.ಸಂಸ್ಕಾರಯುತವಾದ ಶಿಕ್ಷಣ ನೀಡದ ಹೊರತಾಗಿ ಮಹಿಳೆ ಸಬಲೆಯಾಗುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕ ಕೇಶವ ಬಲಿರಾಮ್ ಹೆಡಗೆವಾರ್ ಅವರ ಸಲಹೆ ಪಡೆದು, ಕೌಟುಂಬಿಕ ಜವಾಬ್ದಾರಿಯೊಂದಿಗೆ, ರಾಷ್ಟ್ರದ ಕುರಿತು ಬದ್ದತೆ ಬರುವ ದೃಷ್ಟಿಕೋನದಿಂದ ನಡೆದ ಮೌನ ಕ್ರಾಂತಿಯೇ ಸಮಿತಿಯ ಹುಟ್ಟು.
ದೇಶದ ಬಗ್ಗೆ ಡಾಕ್ಟರ್‌ಜೀಯವರ ಚಿಂತನೆ, ಗಾಂಧೀಜಿಯವರ ಚಿಂತನೆಗಿಂತ ಭಿನ್ನವಾಗಿತ್ತು.ಗಾಂಧಿಯವರ ಚಿಂತನೆ ಸ್ವರಾಜ್ಯವಾದರೆ, ಡಾಕ್ಟರ್‌ಜೀಯವರದು ಸುರಾಜ್ಯವಾಗಿತ್ತು.ನಮಗೆ ಸ್ವಾತಂತ್ರ್ಯ ದಕ್ಕಲಿಲ್ಲ ಎನ್ನುವ ಕಾರಣಕ್ಕಿಂತ ನಾವೇಕೆ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೇವೆ ಎನ್ನುವುದಾಗಿತ್ತು.ಕೇವಲ ವ್ಯಾಪಾರದ ತಕ್ಕಡಿಯನ್ನು ಹಿಡಿದುಕೊಂಡು ಬಂದ ಕೆಂಪು ಮೂತಿಯ ಬಿಳಿ ಪಿಶಾಚಿಗಳ ಎದುರು ಗುಲಾಮರಾಗಿರಲು ಕಾರಣ ಏನು? ಎನ್ನುವುದರ ಫಲ ರೂಪವೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆ. ಆ ಸಂಘಟನೆಯ ಸ್ಥಾಪಕರಾದ ಡಾಕ್ಟರ್‌ಜೀಯವರ ಮಾರ್ಗದರ್ಶನದಿಂದ, ಮೋಶಿಜಿಯವರು ಮಹಾರಾಷ್ಟ್ರದ ವಾರ್ದಾದಲ್ಲಿ ೧೯೩೬ರಲ್ಲಿ ಸಮಿತಿಯನ್ನು ರಚನೆಮಾಡಿದರು.
ದೇಶಕ್ಕಾಗಿ ಸಮರ್ಪಣೆ ಮಾಡುವ ಗುಣಬೆಳೆದಾಗ ಭವಿತವ್ಯದ ಭಾರತ ನಿರ್ಮಾಣ ಸಾಧ್ಯ. ಹಿಂದುತ್ವ ಎನ್ನುವುದು ಜಾತಿಸೂಚಕವಲ್ಲ.ಅದು ದೇಶದ ಪ್ರಜೆಯೊಬ್ಬನ ಅಸ್ಮಿತೆ.ರಾಷ್ಟ್ರೀಯತೆ, ಜಿbಛ್ಞಿಠಿಜಿಠಿqs.ಪುಣ್ಯತಮವಾದ ಭರತಭೂಮಿಯಲ್ಲಿ ಅನೇಕ ಮತಗಳನ್ನು ಹೊಂದಿದವರಿದ್ದಾರೆ.ಮುಸ್ಲಿಂ,ಕ್ರೈಸ್ತ, ಸಿಖ್, ಬೌದ್ದ ಇನ್ನೂ ಅನೇಕ. ಯಾವ ಮತಾವಲಂಬಿಯೇ ಆಗಿರಲಿ, ಆತ ಹಿಂದು.ಹಿಂದುತ್ವ ಎನ್ನುವುದು ಒಂದು ರಾಷ್ಟ್ರವ್ಯವಸ್ಥೆ.
೧೮೯೩ರಲ್ಲಿ ಚಿಕಾಗೋ ವಿಶ್ವಧರ್ಮ ಸಮ್ಮೇಳನಕ್ಕೆ ಹೋದ ಕಾವಿವಸ್ತ್ರದಾರಿ ಸ್ವಾಮಿವಿವೇಕಾನಂದರಿಗೆ ಅವಮಾನ ಮಾಡಬೇಕು ಎನ್ನುವ ಉದ್ದೇಶದಿಂದ, ಜಗತ್ತಿನ ಎಲ್ಲಾ ಮೂಲೆಯಿಂದ ಬಂದ ಧರ್ಮಾನುಯಾಯಿಗಳ ಧರ್ಮಗ್ರಂಥಗಳನ್ನು ಹಿಂದೂ ಧರ್ಮಗ್ರಂಥದ ಇಡುತ್ತಾರೆ.ಎಳ್ಳಷ್ಟೂ ವಿಚಲಿತರಾಗದ ವಿವೇಕಾನಂದರು ಪ್ರಥಮ ಮಾತಿನಲ್ಲೆ, ಅಲ್ಲಿಯವರ ಮನಸ್ಸನ್ನು ಗೆದ್ದು, ಹಿಂದೂ ಸಂಸ್ಕೃತಿಯ ಮಹತ್ವವನ್ನೇ ಬಾನೆತ್ತರಕ್ಕೆ ಏರಿಸುತ್ತಾರೆ. ಅಮೇರಿಕದ ಸಹೋದರ, ಸಹೋದರಿಯರೆ ಎಂಬ ಅಣಿಮುತ್ತುಗಳಾದಾಗ ಸಭಿಕರ ಕರತಾಡನ. ಅಲ್ಲಿಯವರೆಗೆ ಅಷ್ಟು ಗೌರವಯುತವಾತ ಮಾತುಗಳನ್ನೆ ಕೇಳಿರದ ಜನ, ಆ ಸಂದರ್ಭದಲ್ಲಿ ಮುಂದಿನ ಮಾತುಗಳಿಗಾಗಿ ಕುತೂಹಲಿಗಳಾಗುತ್ತಾರೆ. ಒಂದೇ ಬಾರಿಗೆ ಕೆಳಗಡೆ ಇಟ್ಟಿದ್ದ ಹಿಂದು ಧರ್ಮಗ್ರಂಥವನ್ನು ತೆಗೆದಾಗ,ಉಳಿದ ಗ್ರಂಥಗಳು ಬುಡ ಕಡಿದ ಮರದಂತೆ ದೊಪ್ಪನೆ ಬಿದ್ದವು. ಆ ಸಂದರ್ಭದ ವಿವೇಕಾನಂದರ ನುಡಿ ಹಿಂದುತ್ವಕ್ಕೆ ಶಿಖರಪ್ರಾಯವಾದುದು.ದೇಶದ ಎಲ್ಲಾ ಧರ್ಮಗ್ರಂಥಗಳೂ ನಿಂತಿರುವುದು ಹಿಂದುಧರ್ಮದ ಭದ್ರಬುನಾಧಿಯ ಮೇಲೆ. ಎಂತಹ ಪರಿಕಲ್ಪನೆ ಸ್ವಾಮೀಜಿಯವರದು....
ಪ್ರತಿಯೊಬ್ಬನ ಮಾನಸಿಕತೆ ಬದಲಾವಣೆ ಆದಾಗ ಸಮಾಜಮುಖಿ ಕಾರ್ಯ ಅದ್ಭುತವಾಗಿ ನಡೆಯುತ್ತದೆ. ಹಿಂದು ಸಮಾಜದಲ್ಲಿ ಸ್ತ್ರೀಯರಿಗೆ ಪೂಜನೀಯ ಸ್ಥಾನವಿದೆ. ಜಗತ್ತಿನಲ್ಲಿ ಅನೇಕ ಸಂಸ್ಕ್ರತಿಗಳು ಹುಟ್ಟಿ, ಹೇಳಹೆಸರಿಲ್ಲದೇ ನಾಶವಾಗಿ ಹೋದವು.ಹಿಂದು ಸಂಸ್ಕೃತಿ ನಾಶವಾಗಲಿಲ್ಲ ಕಾರಣವಿಷ್ಟೆ ಇಲ್ಲಿನ ವ್ಯವಸ್ಥೆಗಳು ಕುಟುಂಬ ನಿರ್ವಹಣೆಯಲ್ಲಿ ಆಳವಾಗಿ ಬೇರೂರಿದೆ. ಎಲ್ಲಿಯವರೆಗೆ ಹೆಣ್ಣು ತ್ಯಾಗಮಯಿ,ವಿಚಾರವಂತೆ, ಸಹನಶೀಲೆಯಾಗಿರುತ್ತಾಳೊ, ಅಲ್ಲಿಯವರೆಗೆ ಅಯೋಗ್ಯ ಪುರುಷ ಇರುವುದಕ್ಕೆ ಸಾಧ್ಯವಿಲ್ಲ. ಹೆಣ್ಣೊಬ್ಬಳು ಉತ್ತಮ ವಿದ್ಯೆಯನ್ನು ಕಲಿತಾಗ ಸಮಾಜದ ಕಳೆಯನ್ನು ತೆಗೆಯಲು ಸಹಕಾರಿಯಾಗುತ್ತಾಳೆ.
ಮುಖ್ಯವಾಗಿ ಬ್ರಿಟಿಷರು ನಮ್ಮ ಸಂಸ್ಕೃತಿಯನ್ನು ನಾಶಪಡಿಸಲು ಕಂಡುಕೊಂಡ ದ್ವಿ-ಸೂತ್ರಗಳು ೧.ಕೃಷಿಪದ್ದತಿಯ ನಾಶ
೨.ಗುರುಕುಲ ಪದ್ದತಿಯ ಶಿಕ್ಷಣ ನಾಶ
ನಮ್ಮ ಗುರುಕುಲ ಶಿಕ್ಷಣ ಪದ್ದತಿಯ ನಾಶಪಡಿಸಬೇಕೆಂದು ಮೆಕಾಲೆ ಇಂಗ್ಲೀಷ್ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದನು.ಇದರಿಂದ ವಿದ್ಯೆ ಕಲಿತ ನಾಯಕರು ಇಂದು ಗೋಮುಖ ವ್ಯಾಘ್ರಗಳಂತೆ ವರ್ತಿಸುತ್ತಿದ್ದಾರೆ.ಇದು ನಮ್ಮ ನಾಯಕರ ಸ್ಥಿತಿಯಾದರೆ ನಮ್ಮ ಮಕ್ಕಳ ಪರಿಸ್ಥಿತಿಯೆ ಬಹಳ ಶೋಚನೀಯವಾಗಿದೆ.
ಇತ್ತೀಚಿಗೆ ಶಾಲಾ ಮಕ್ಕಳಿಗೆ ನಡೆದ ರಸಪ್ರಶ್ನೆಯಲ್ಲಿ ಒಂದು ಪ್ರಶ್ನೆ ಕೇಳಲಾಯಿತು. ನಿಮ್ಮ ನೆಚ್ಚಿನ ನಾಯಕ ಯಾರು? ಅದಕ್ಕಾಗಿ ಇದ್ದ ಉತ್ತರಗಳು ಸಲ್ಮಾನ್‌ಖಾನ್, ಸಚಿನ್ ತೆಂಡೂಲ್ಕರ್. ಈಗಿನ ಮಕ್ಕಳಿಗೆ ಚಿತ್ರನಟ,ನಟಿಯರು ಹಾಗೂ ಕ್ರಿಕೆಟ್ ಆಟಗಾರ ನಾಯಕನಾಗುತ್ತಾನೆ ಆದರೆ ವಿಕ್ರಂ ಬ್ರಾತ್ರಾ, ಉನ್ನಿಕೃಷ್ಣನ್ ಹಾಗೂ ಗಡಿಯಲ್ಲಿ ಹೋರಾಡಿ ಮಣಿದ ವೀರರು ಯಾಕೆ ನಾಯಕರಾಗುತ್ತಿಲ್ಲ..? ಇದು ಇಂದಿನ ಶಿಕ್ಷಣ ಪದ್ದತಿಯ ದುರಂತವಲ್ಲದೆ ಮತ್ತೆನು? ಪ್ರಸ್ತುತ ಸಮಾಜದಲ್ಲಿ ಅಪ್ರಸ್ತುತ ವಿಷಯಗಳು ಬೇಗ ಮನದಾಳಕ್ಕೆ ಹೋಗುತ್ತವೆ.ಅದನ್ನು ಯಾವ ರೀತಿ ತೆಗೆದುಕೊಳ್ಳುತ್ತಿದ್ದೇವೆ ಎನ್ನುವುದು ಪ್ರತಿಯೊಬ್ಬರ ಭಾವಕ್ಕೆ ಸೀಮಿತವಾಗಿರುವುದು.
ಗುರುವಿಗೆ ಉತ್ತಮವಾದ ಸ್ಥಾನವಿಲ್ಲಾ. ``ಗುರುಬ್ರಹ್ಮ, ಗುರುವಿಷ್ಣು,ಗುರುದೇವೋ ಮಹೇಶ್ವರಃ ಗುರುಸಾಕ್ಷತ್ ಪರಃಬ್ರಹ್ಮ ತಸ್ಮೆಯೀ ಶ್ರೀ ಗುರುವೇ ನಮಃ``
ಮೂವರು ದೇವರನ್ನೂ ಒಬ್ಬರಲ್ಲೆ ಕಾಣುವ ಗುರುಸ್ವರೂಪಿ ಇಂದು ಕಾಮಪೀಪಾಸು ಆಗಿದ್ದಾನೆ.ಅಂಥ ಗುರುವಿನಿಂದ ಕಲಿತ ಸಮಾಜದ ಸ್ಥಿತಿ ದೇವರೆಗತಿ.
ಬೆಂಗಳೂರಿನಲ್ಲಿ ಈಗ ಒಂದು ದಿನದ ಮಟ್ಟಿಗೆ ಹೆಂಡತಿಯ ಬದಲಾವಣೆ,ಜಿqಜ್ಞಿಜ ಠಿಟಜZಠಿeಛ್ಟಿ,ಜZqs ಜಿಜeಠಿo ಈಗ ಚಾಲ್ತಿಯಲ್ಲಿದೆ. ಮದುವೆ ಎನ್ನುವುದು ಹಿಂದೂ ಸಂಸ್ಕೃತಿಯಲ್ಲಿ ಎರಡು ವ್ಯಕ್ತಿಗಳ ಮಿಲನ ಅಲ್ಲಾ ಅದು ಹಿರಿಯರ ಸಮ್ಮುಖದಲ್ಲಿ ಅಗ್ನಿಸಾಕ್ಷಿಯಾಗಿ ಕೈಹಿಡಿದು,ಸಪ್ತಪದಿ ತುಳಿದು ಜೀವನ ಪರ್ಯಂತ ಹಾಲುಜೇನಿನಂತೆ, ಅನ್ಯೋನ್ಯತೆಯಿಂದ ಬಾಳುವೆ ಮಾಡುತ್ತೆನೆಂದು, ಮಾಂಗಲ್ಯಧಾರಣೆ ಮಾಡುವುದೇ ಮದುವೆ. ಯೌವನದಲ್ಲಿ ಪ್ರಣಯದ ಸಾರಥಿಯಾಗಿ,ನಡುವಯಸ್ಸಿನಲ್ಲಿ ಹೆಗಲಿಗೆ ಹೆಗಲಾಗಿ, ಇಳಿವಯಸ್ಸಿನಲ್ಲಿ ಕೈಹಿಡಿದು ಸಲಹುವ ಸಂಗಾತಿ ಇರಬೇಕೆಂದು ಹೆಣ್ಣು ಬಯಸುತ್ತಾಳೆ.ಆದರೆ ಹೆಂಡತಿಯನ್ನು ಇನ್ನೊಬ್ಬರ ಬಳಿ ಸೆರಗೊಡ್ಡುವಂತೆ ಪ್ರಚೋದನೆ ಮಾಡುವುದು, ಮದುವೆಯಾಗುವುದಕ್ಕಿಂತ ಮುಂಚೆ ಒಂದಾಗಿ ಜೀವನ ನಡೆಸುವುದು, ಸಲೀಂಗ ಕಾಮಕ್ಕೆ ಕಾನೂನು ಅನುಮತಿ ಕೊಟ್ಟಿರುವಾಗ ನಮ್ಮ ಶಿಕ್ಷಣ ಪದ್ದತಿಯ ಸ್ಪಷ್ಟ ಚಿತ್ರಣ ತಿಳಿಯಬಹುದು.
ಬೆಳವಣಿಗೆಗೆ ಸ್ವಾತಂತ್ರ್ಯ ಬೇಕು ನಿಜ, ಅದು ಮೌಲ್ಯಾಧಾರಿತವಾಗಿದ್ದು, ಸಮಾನತೆ ಇರಬೇಕು...ಆದರೆ ಮದ್ಯರಾತ್ರಿಯಲ್ಲಿ ಕುಣಿದು ಕುಪ್ಪಳಿಸುವ ಸ್ವಾತಂತ್ರ್ಯ ಬೇಕೆ?
ಇಂದು ಅನೇಕ ಮಾದ್ಯಮಗಳು ವಿಕೃತ ವಿಚಾರಗಳನ್ನು ಪ್ರಸಾರ ಮಾಡುತ್ತಿವೆ. ತನ್ನ ಹೆಂಡತಿಗೆ ಹೊಡೆದು ಜೈಲು ಸೇರಿ ಚಿತ್ರನಟ, ಸಮಾಜದಲ್ಲಿ ನಾಯಕನಾಗುತ್ತಾನೆ.ನಾವಿಂದು ನಾಲ್ಕು ಗೋಡೆಗಳ ಮದ್ಯೆ ಕುಳಿತು ವಿದೇಶಿ ಸಂಸ್ಕೃತಿಯನ್ನು ಬರಮಾಡಿಕೊಳ್ಳುತ್ತಿದ್ದೇವೆ. ಜಾಗತಿಕ ಅಲೆಯಲ್ಲಿ ಭೋಗಕ್ಕೆ ಕಟ್ಟುಬಿದ್ದು ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ಲವ್‌ಜಿಹಾದ್, ಮತಾಂತರ,ಮಾನವ ಕಳ್ಳಸಾಗಣೆಯಂಥ ದುಷ್ಟಶಕ್ತಿಗಳುತಮ್ಮ ಕಬಂಧ ಬಾಹುಗಳನ್ನು ಚಾಚಿವೆ.ಮಾನವ ಕಳ್ಳಸಾಗಣೆಯ ೨೦೦೦ ಪ್ರಕರಣಗಳು ತಿರುವನಂತಪುರದಲ್ಲಿ ದಾಖಲಾಗಿವೆ.ಇದೆಲ್ಲಾ ದಾಖಲಾದ ಪ್ರಕರಣಗಳಾದರೆ ದಾಖಲಾಗದ್ದು ಇನ್ನೆಷ್ಟೋ...
ಕೃಷಿಪದ್ದತಿಯ ಮೇಲೂ ದುಷ್ಪರಿಣಾಮವಾಗಿದೆ.೧೭೬೦ರಲ್ಲಿ ತಮಿಳ್ನಾಡಿನ ಆರ್ಕಾಟ್‌ನಲ್ಲಿ ೧ಎಕರೆ ಜಮೀನಿನಲ್ಲಿ ೫೬ಕ್ವಿ. ಬೆಳೆ ತೆಗೆಯುತ್ತಿದ್ದರು.ಅದೇಸಮಯ ಇಂಗ್ಲೆಂಡ್‌ನಲ್ಲಿ ೧ಎಕರೆಗೆ ೨೬ಕ್ವಿ. ಮಾತ್ರ ಬೆಳೆ ತೆಗೆಯುತ್ತಿದ್ದರು. ಇದನ್ನು ಮನಗಂಡ ಬ್ರಿಟಿಷರು ನಮ್ಮ ಕೃಷಿಪದ್ದತಿಯ ಮೇಲೆ ವಾಸಿಯಾಗದ ಬರೆಯನ್ನೆಳೆದರು.ಅವರು ನಮ್ಮ ಕೃಷಿಪದ್ದತಿಯ ನಾಶಕ್ಕಾಗಿ ಆಯ್ದುಕೊಂಡ ಮಾರ್ಗ ಗೋಹತ್ಯೆ. ಆಗ ೩೫೦ ಇದ್ದ ಕಸಾಯಿಖಾನೆಗಳು ಈಗ ೩೬೦೦ಕ್ಕೂ ಮಿಕ್ಕಿವೆ.
ಮತಾಂತರ, ರಾಷ್ಟ್ರಾಂತರ, ಭ್ರಷ್ಟಾಚಾರಗಳು ಘೋರ ಪಿಡುಗುಗಳಾಗಿವೆ. ನಮ್ಮ ಕಾನೂನು ವ್ಯವಸ್ಥೆ ಎಲ್ಲಿಯವರೆಗೆ ಮುಟ್ಟಿದೆಯೆಂದರೆ ಸಂಸತ್ ಭವನದ ಮೇಲೆ ದಾಳಿಮಾಡಿದ ಅಫಜಲ್ ಗುರುವಿನ ಗಲ್ಲುಶಿಕ್ಷೆ ಆದರೂ, ಮುಂಬೈ ದಾಳಿ ಮಾಡಿದ ಕಸಬ್‌ನಂಥ ರಾಷ್ಟ್ರದ್ರೋಹಿಗಳಿಗೆ ರಾಜಮರ್ಯಾದೆ ಸಿಗುತ್ತಿದೆ. ಅವರಿಗೆ ಶಿಕ್ಷೆಯಾಗದೇ ಕಾಯುವುದಕ್ಕೆ ಕೋಟಿಗಟ್ಟಲೇ ಖರ್ಚುಮಾಡುತ್ತಿದೆ ನಮ್ಮ ಘನ ಸರ್ಕಾರ...qಟಠಿಛಿ ಚಿZh mಟ್ಝಜಿಠಿಜ್ಚಿo ಅಲ್ವೇ ಇದು?
ಅನೇಕ ಹೆಣ್ಣುಮಕ್ಕಳು ದುಡಿಯುವ ಆಸೆಯಿಂದ ಪಟ್ಟಣವನ್ನು ಸೇರುತ್ತಾರೆ.ಸರಿಯಾದ ದಾರಿ ಕಾಣದೆ, ಭ್ರಮನಿರಸನ ಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.ಇಂತಹ ಅನೇಕ ಸಮಸ್ಯೆಗಳು ಸಮಾಜದಲ್ಲಿ ಇದೆ. ಇದರಿಂದ ಪಲಾಯನವಾದಿಗಳಾಗದೇ ಎಚ್ಚೆತ್ತುಕೊಳ್ಳುವ ಶಕ್ತಿ, ಸ್ವಾವಲಂಭನೆಯ ಶಿಕ್ಷಣ ಆಗಬೇಕು. ಪ್ರತಿಯೊಂದು ಮನೆಯಿಂದ ದುಷ್ಟಶಕ್ತಿಯ ದಮನಗೈಯುವ ದುರ್ಗೆಯರ ಅವತಾರ ಆಗಬೇಕು ಆಗಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ.

No comments:

Post a Comment