Friday 21 June 2013

ಸೌಕೂರು


ಪುಷ್ಪ ಪವಾಡ ಖ್ಯಾತಿಯ ಸೌಕೂರು ಮಾತೆ-ಮದುವೆಯ ಯೋಗ ಕೂಡಿಸುವ ಮಹಾತಾಯಿ
ಅತ್ಯಂತ ಪ್ರಾಚೀನವಾದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಡುಪಿ ಜಿಯ ಕಾರಣಿಕ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದೆ. ಈ ದೇವಸ್ಥಾನಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ.
ಸೌಕ್ಯ ಮುನಿಗಳು ಈ ಸ್ಥಳದಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿದ ಕಾರಣದಿಂದ ಅವರ ಹೆಸರಿನಿಂದಲೆ ಕರೆಯಲಾಯಿತು. ಸೌಕ್ಯ ಮುನಿ ವಾಸವಾಗಿದ್ದ ಸೌಕ್ಯಪುರವೇ ಮುಂದೆ ಸೌಕೂರು ಎಂದು ಪ್ರಸಿದ್ದವಾಯಿತು. ಪರಾಶಕ್ತಿಯು ದುರ್ಗಾಸುರನನ್ನು ಕೊಂದು ಈ ಸ್ಥಳದಲ್ಲಿ ದೇವಿಯು ದುರ್ಗಾಪರಮೇಶ್ವರಿ ಅಮ್ಮನವರಾಗಿ ನೆಲೆಯಾಗಿದ್ದರು. ಈ ಮಹಾತಾಯಿಯ ಪವಾಡ ಅಪಾರ. ಈ ತಾಯಿಯು ಕಮಲೆ ಶಿಲೆಯ ಬ್ರಾಹ್ಮೀ ದುರ್ಗೆಯ ಅಕ್ಕನೆನ್ನುವ ಪ್ರತೀತಿ ಇದೆ. ಈಗಲೂ ಜನರು ಅದನ್ನು ನಂಬುತ್ತಿದ್ದಾರೆ. ಇವಳು ಹಿರಿಯವಳು, ಬ್ರಾಹ್ಮೀ ಕಿರಿಯವಳು ಎಂದು ಜನ ಜನಿತವಾದ ನಾಣ್ಣುಡಿಯೊಂದಿಗೆ ಬೆರೆತ ಐತಿಹ್ಯವಿದೆ. ದೇವಿಯು ಲಕ್ಷ್ಮೀ, ಕಾಳಿ ಮತ್ತು ಸರಸ್ವತಿಯ ಮೂರು ರೂಪವೊಂದಾಗಿ ತ್ರಿಶಕ್ತಿ ದೇವತೆಯಾಗಿ ತ್ರೈಲೋಕಪಾಲಕಿಯಾಗಿzಳೆ. ಇವಳ ಶಕ್ತಿ ಅಪಾರವಾದುದು. ಮಹಿಮೆ ಕೇಳಿದರೆ ಜನುಮವೇ ಪಾವನಮಯವಾಗುತ್ತದೆ. ಇವಳು ಪುಪ್ಷಪವಾಡ ಖ್ಯಾತಿಯ ದೇವತೆ. ಅಂದರೆ ಮದುವೆ ಸಂಬಂದಗಳನ್ನು ಈ ತಾಯಿಯ ಮುಡಿಯ ಮೇಲೆ ಇಟ್ಟು ಎಡ-ಬಲ ಕಡೆಯಿಂದ ಪ್ರಸಾದ ರೂಪದಲ್ಲಿ ಪುಷ್ಪ ಜರಿದರೆ ಶುಭ ಹಾಗೂ ಮುಂದುವರಿಸಬೇಕೆಂದು ಇಲ್ಲ ವಾದಲ್ಲಿ ಬೇಡವೆಂದು ತಿಳಿಯುವ ಮೂಲಕ ಮದುವೆಯ ಸಂಬಂದ ಮುಂದುವರೆಸುತ್ತಾರೆ.
ಸೌಕೂರು ದೇವಸ್ಥಾನದ ಗರ್ಭಗುಡಿಯಲ್ಲಿ ಏಕಪೀಠದ ಮೇಲೆ ಮೂರು ಲಿಂಗಗಳನ್ನು ಪ್ರತಿಷ್ಠಾಪಿಸಿzರೆ. ಅವು ದುರ್ಗಾ ದೇವಿಯ ಮಹಾಕಾಳಿ ಸ್ವರೂಪಿ, ಮಹಾಲಕ್ಷ್ಮೀ, ಮಹಾಸರಸ್ವತಿಯ ಪ್ರತೀಕಗಳಾಗಿವೆ. ಶ್ರೀ ದುರ್ಗಾಪರಮೇಶ್ವರಿ ಎಂದು ಕರೆಯುವ ಪಂಚಲೋಹದ ಅಲಂಕಾರ ಮೂರ್ತಿಯನ್ನು ಲಿಂಗಗಳ ಹಿಂಬದಿಯಲ್ಲಿ ಸ್ಥಾಪಿಸಿzರೆ. ಈ ಕ್ಷೇತ್ರದಲ್ಲಿ ಲಿಂಗ ಸ್ವರೂಪಿಯಾಗಿ ತ್ರಿಶಕ್ತಿ ಆವಿರ್ಭವಿಸಿರುವ ದೇವಿಯನ್ನು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರೆಂದು ಆರಾಸುತ್ತಾರೆ.
ಪುಷ್ಪ ಪವಾಡ ಖ್ಯಾತಿಯ ಮಾತೆ:
ಪುಷ್ಪ ಪವಾಡ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಭಕ್ತಾದಿಗಳ ಪ್ರಶ್ನೆ, ಪ್ರಸಾದ, ನೆಂಟಸ್ತಿಕೆಗಳ ಬಗ್ಗೆ ಹೂವಿನ ಪ್ರಸಾದ ನೋಡುವ ಖ್ಯಾತಿಯ ಕ್ಷೇತ್ರವಾಗಿದೆ. ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಿ ಮದುವೆಯ ಯೋಗ ಕೂಡಿಸುವ ಮಹಾತಾಯಿ ಎಂಬ ನಂಬಿಕೆ ಇದೆ. ದೇವಿಗೆ ಸಿಂಗಾರ ಗೊನೆ ಏರಿಸಿ ಅದರ ಮೇಲೆ ಹೂಗಳನ್ನಿಡುತ್ತಾರೆ. ಭಕ್ತರು ತಮ್ಮ ಕಾರ್ಯವನ್ನು ಉzಶಿಸಿ ಪ್ರಾರ್ಥಿಸಿಕೊಂಡು ದೇವಿಯ ಸನ್ನಿಯ ಪ್ರಸಾದ ಕೋರುತ್ತಾರೆ. ದೇವಿಯ ಮುಡಿಯಿಂದ ಹೂವಿನ ಪ್ರಸಾದವಾದಾಗ ಭಕ್ತಾಗಳು ಧನ್ಯತೆಯಿಂದ ನಮಸ್ಕರಿಸುತ್ತಾರೆ. ಪ್ರಸಾದದ ಪುಷ್ಪಗಳು ದೇವಿಯ ಮುಡಿಯಿಂದ ಎಡ ಬಲಗಳೆನ್ನದೆ ಎತ್ತ ಕಡೆ ಬಿದ್ದರೂ ಸಮ ಕಾರ್ಯ ಜಯ ಎಂದು ಭಕ್ತರು ನಂಬಿಕೆ. ಪುಷ್ಪ ಬೀಳದೆ ಇದ್ದರೆ ಆ ಕಾರ್ಯದ ಬಗ್ಗೆ ಪರಾಮರ್ಶಿಸಲು ಕಾರ್ಯ ಮುಂದೂಡುತ್ತಾರೆ.
ಇತರ ದೇವತೆಗಳು:
ದೇವಸ್ಥಾನದಲ್ಲಿ ಪರಿವಾರ ದೇವತೆಗಳಾಗಿ ಈಶ್ವರ, ಗಣಪತಿ, ವೀರಭದ್ರ, ಹುಲಿ ದೇವರುಗಳಿzರೆ. ಶಿರದಿಂದ ಎದೆಯ ಭಾಗದ ವರೆಗೆ ಮಾತ್ರ ಇರುವ ವೀರಭದ್ರ ದೇವರ ಅಪರೂಪದ ಶಿಲಾಮೂರ್ತಿಯೊಂದು ಇಲ್ಲಿದೆ. ವರ್ಣಮಯವಾದ ಬಾಗಿಲು ಬೊಬ್ಬರ್ಯ ಇಲ್ಲಿzನೆ. ವಿಶೇಷ ಪರ್ವಗಳಲ್ಲಿ ಬಾರಿಸುವ ಪುರಾತನ ಕಾಲದ ದೊಡ್ಡದೊಂದು ಗಂಟೆ ಇಲ್ಲಿದೆ.
ದೇವಾಲಯದ ಗರ್ಭಗುಡಿ ಸಂಪೂರ್ಣ ಶಿಲಾಮಯವಾಗಿ ಪೂರ್ವಾಭಿಮುಖವಾಗಿದೆ. ದೇವಸ್ಥಾನದ ಗೋಪುರ, ಶಿಖರವು ಶಿಲ್ಪಕಲೆಯ ವೈಭವ ನೋಡುವಂತಿದೆ. ಇಲ್ಲಿ ಅತೀ ಎತ್ತರದ ಧ್ವಜಸ್ತಂಭವು ದೇವಸ್ಥಾನದ ಸೌಂದರ್ಯಕ್ಕೆ ಮೆರುಗು ನೀಡಿದೆ. ಸೌಕೂರು, ಕಮಲಶಿಲೆ, ಕೊಲ್ಲೂರು ಅಮ್ಮನವರ ದೇವಸ್ಥಾನಗಳಲ್ಲಿ ಪರಸ್ಪರ ಸಾಮ್ಯಗಳಿದ್ದು ಜನ ಅಕ್ಕ-ತಂಗಿಯರ ದೇವಸ್ಥಾನ ಎಂದು ಭಕ್ತಿಯಿಂದ ಹೇಳುತ್ತಾರೆ. ಕ್ಷೇತ್ರದ ಒಳ ಪೌಳಿಯಲ್ಲಿ ಸುಮಾರು ಹತ್ತನೆ ಶತಮಾನಕ್ಕೆ ಸಲ್ಲುವ ಶಿಲಾ ಶಾಸನಗಳಿವೆ. ಒಳ ಸುತ್ತಿನ ಹೆಬ್ಬಾಗಿಲಿನ ಮಾಡಿಗೆ ತಾಮ್ರದ ಹೊದಿಕೆಯನ್ನು ವ್ಯವಸ್ಥೆಗೊಳಿಸಲಾಗಿದೆ.
ಸೌಕೂರು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸುಂದರವಾದ ಚತುರ್ಭುಜ ದುರ್ಗಾಪರಮೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಇದೆ. ಇಷ್ಟೊಂದು ಪ್ರಖ್ಯಾತವಾದ ಈ ಪ್ರಾಚೀನ ದೇವಸ್ಥಾನವು ಇತ್ತೀಚೆಗೆ ಗರ್ಭಗುಡಿ ಹೊರತು ಪಡಿಸಿ ಸಂಪೂರ್ಣ ನವೀಕರಣವಾಗಿದೆ. ಕುಬ್ಜಾ ಹಾಗೂ ವಾರಾಹಿ ನದಿಗಳ ಸಂಗಮದ ಸಮೀಪದ ಎತ್ತರದ ಸ್ಥಳದಲ್ಲಿ ಸೌಕೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ನಿರ್ಮಿಸಲಾಗಿದೆ. ಸೌಕೂರು ಅಮ್ಮನವರ ಕ್ಷೇತ್ರದ ಪರಿಸರದಲ್ಲಿ ಜನುವಾರು ಕಳೆದು ಹೋದರೆ ಹುಲಿದೇವರಿಗೆ ವಿವಿಧ ರೀತಿಯ ಹರಕೆ ಸಲ್ಲಿಸುವ ಪದ್ಧತಿಯಿದೆ.
ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ಅಶ್ವತ್ಥಕಟ್ಟೆ ಇದ್ದು, ಉತ್ತರ ದಿಕ್ಕಿನಲ್ಲಿ ನಾಗ ಸಾನ್ನಿಧ್ಯವಿದೆ. ನಾಗ ಸಾನ್ನಿಧ್ಯದ ಕೆಳಗೆ ಸ್ವಲ್ಪ ದೂರದ ಜಗದಲ್ಲಿ ಮೇಲುಗಡೆ ಸೀಳಿದ ಶಿಲೆಕಲ್ಲು ಇದೆ. ಇದನ್ನು ಶ್ರೀದೇವರ ಮೂಲಸ್ಥಾನ ಎಂದು ಭಾವಿಸಿ, ಉತ್ಸವದ ದಿನಗಳಲ್ಲಿ ಇಲ್ಲಿಯೂ ಪೂಜೆ ಸಲ್ಲಿಸುವ ಪದ್ಧತಿ ಇದೆ. ಸೌಕೂರು, ಗುಲ್ವಾಡಿ ಗ್ರಾಮದ ಕೂಡು ಗ್ರಾಮವಾಗಿದ್ದು ಪುರಾತನ ಗುಲ್ವಾಡಿ ಕೋಟೆಯ ಅವಶೇಷಗಳ ಜಗದಿಂದ ಸ್ವಲ್ಪವೇ ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.
೧೭೮೨ ರ ಮೈಸೂರು ಅರಸರ ಸೇನೆಯ ಬಸ್ರೂರು ದಾಳಿಯ ನಂತರ ಗುಲ್ವಾಡಿ ನಿರ್ಜನವಾಯಿತು. ಕೋಟೆಯ ಒಳಗಿದ್ದ ಗೋಪಾಲಕೃಷ್ಣ ದೇವಸ್ಥಾನ ಎರಡಂಕಣದ ಕಟ್ಟಡವಿದ್ದರೂ-ದೇವರ ಮೂರ್ತಿ ಮಾತ್ರ ನಾಪತ್ತೆಯಾಗಿದೆ. ಗುಲ್ವಾಡಿ ಕೋಟೆಯ ಸ್ಥಳದ ಸಮೀಪ ಇರುವ ಆಂಜನೇಯ ದೇವಸ್ಥಾನದಲ್ಲಿ ಸಾಧಾರಣ ಎರಡೂವರೆ ಅಡಿ ಎತ್ತರದ ಶಿಲಾ ಪ್ರತಿಮೆ ಈಗಲೂ ಇದೆ. ಸೌಕೂರು ದೇವಸ್ಥಾನದ ಇತಿಹಾಸದಲ್ಲಿ ಇದನ್ನು ತಾತಯ್ಯನ ಮಠ ಎಂದು ಗುರುತಿಸಲಾಗಿದೆ. ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಿಯ ಆರಾಧಕರಾಗಿ-ಗುಲ್ವಾಡಿ ಕೋಟೆಯಲ್ಲಿದ್ದ ರಾಮ ಕ್ಷತ್ರಿಯ ಸೇನೆಯ ದಂಡಿಗೆಗಳ ಯೋಧರು-ಕೋಟೆಯ ಪತನದ ನಂತರ ಕುಟುಂಬ ಸಹಿತ ಕುಂದಾಪುರಕ್ಕೆ ವಲಸೆ ಹೋಗಿದ್ದರು ಎಂದು ತಿಳಿದು ಬರುತ್ತದೆ. ಇದೇ ಕಾಲದಲ್ಲಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಮಾರ್ಗದಲ್ಲಿದ್ದ  ಕಂಬದಕೋಣೆ, ಕೆರ್ಗಾಲು ಬಳಿಯ ಹಳಗೇರಿಗಳು ಸೇನಾ ಪಾಳೆಯ ಮತ್ತು ಹೊಸ ಕೋಟೆಗಳು ಶತ್ರುಗಳ ಹಿಂಸೆಗೆ ತುತ್ತಾಗಿ ಜರ್ಜರಿತವಾಯಿತು.
ಹಳಗೇರಿಯ ನದಿ ಮುಖಜ ಭೂಮಿಯಲ್ಲಿರುವ ಅತ್ಯಂತ ಪುರಾತನವಾದ ಶಿಲಾಮಯ ಕುಕ್ಕೇಶ್ವರ ದೇವಸ್ಥಾನದ ಇತಿಹಾಸದಲ್ಲಿ ಇದನ್ನು ಉಖಿಸಿ, ಹಳಗೇರಿ ಸೇನಾ ಬೀಡು ಖಾಲಿಯಾದ ಪ್ರಸಂಗವನ್ನು ಕೂಡ ಪ್ರಸ್ತಾಪಿಸಲಾಗಿದೆ. ಕನ್ನಡ ಕರಾವಳಿಯ ಪ್ರದೇಶ ಪುಣ್ಯ ಕ್ಷೇತ್ರಗಳ ಬೀಡು, ವಿಜಯನಗರ ಸಾಮ್ರಾಜ್ಯದ ನಂತರ ಕೆಳದಿಯರಸರ ಆಳ್ವಿಕೆಯ ಕಾಲದಲ್ಲಿ ರಾಜಾಶ್ರಯದೊಡನೆ ಶಿಲ್ಪಕಲಾ ವೈಭವದಿಂದ ಮೆರೆದ ಹಲವು ದೇವಸ್ಥಾನಗಳು ಇಲ್ಲಿವೆ.
ಶ್ರೀರಂಗ ಪಟ್ಟಣದ ಯುದ್ಧದ ನಂತರ ಕನ್ನಡ ಕರಾವಳಿ ಇಂಗ್ಲಿಷರ ಆಡಳಿತಕ್ಕೊಳಪಟ್ಟಿದ್ದು, ಕೆನರಾ ಜಿಯ ಪ್ರಥಮ ಕಲೆಕ್ಟರ್ ಲೋರ್ಡ್ ಮುನ್ರೋ ಕಾಲದಲ್ಲಿಯೆ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸರ್ಕಾರ ಮನ್ನಣೆ ನೀಡಿ ವಾರ್ಷಿಕ ತಸ್ತೀಕು ಪಟ್ಟಿಯಲ್ಲಿ ನಮೂದಿಸಲಾಗಿದೆ ಎಂದು ತಿಳಿಯುತ್ತದೆ.
ಸೌಕೂರು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇನ್ನೂರು ವರ್ಷಗಳಿಂದ ಕಲಾ ಸೇವೆ ಮಾಡುತ್ತ ದೇವಿಯ ನೆನಪನ್ನು ಸದಾ ಮಾಡುತ್ತಿದೆ. ಮಹಾದೇವಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರನ್ನು ನಂಬಿದವರಿಗೆ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ. ಇವಳ ಮಹಿಮೆಯನ್ನು ತಿಳಿಯಲು ಶ್ರೀ ದೇವಿಯನ್ನು ಒಮ್ಮೆ ಕಣ್ತುಂಬ ನೋಡಿ ಕೃತಾರ್ಥರಾಗಿ, ಭಗವತಿ ದುರ್ಗೆಯ ಪಾದಾರವಿಂದಗಳಿಗೆ ಎರಗಿ ಅಮ್ಮನ ಕೃಪಾಶೀರ್ವಾದವನ್ನು ಪಡೆಯಿರಿ.

ಸ್ಥಳಕ್ಕೆ ದಾರಿ: ದೇವಿಯ ತಾಣವನ್ನು ಸಂದರ್ಶಿಸಲು ಕೊಲ್ಲೂರು ಮೂಕಾಂಬಿಕಾ ಅಮ್ಮನವರು ಮತ್ತು ಬ್ರಾಹ್ಮೀ ದುರ್ಗೆಯನ್ನು ನೋಡಿ ಅದೇ ಮಾರ್ಗವಾಗಿ ನೇರಳಕಟ್ಟೆಯಿಂದ ಶ್ರೀ ಸೌಕೂರು ದೇವಿಯ ಸಾನಿಧ್ಯವನ್ನು ಕಾಣಬಹುದು. ಕುಂದಾಪುರದಿಂದ ತಲ್ಲೂರು-ನೇರಳಕಟ್ಟೆ ಮಾರ್ಗದಲ್ಲಿ ಸಾಗಿದಾಗ ಗುಲ್ವಾಡಿ ಸಮೀಪದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಭವ್ಯ ಗೋಪುರ ಗೋಚಾರವಾಗುತ್ತದೆ.
ಭಕ್ತರೇ ದೇವಿಯನ್ನೊಮ್ಮೆ ಕಣ್ಣಾರೆ ನೋಡಿ-ನಿಮ್ಮ ಜೀವನ ಪಾವನವಾಗಿಸಿಕೊಳ್ಳಿ.

No comments:

Post a Comment