Friday 21 June 2013

ಅಕ್ರಮ ನಿವಾಸಿಗಳಿಗೆ ನಿತಾಕತ್ ಕಾರ್ಮಿಕ ಕಾನೂನು ಅನ್ವಯ-ಸಭ್ಯರಿಗಿಲ್ಲ ಭಯ.
ಕಾನೂನಿನ ನೆಪದಲ್ಲಿ ದೇಶದ ನೆನಪು ಮರುಕಳಿಕೆ

ಉತ್ತರಕೆ ನೋಡಲ್ಲಿ ಯಾರಿಹನು..ಕಿರೀಟದಂತೆ ಶೋಭಿಸುವ ಹಿಮರಾಜ ತಾನಿಹನು;
ದಕ್ಷಿಣದ ಕಡೆ ನೋಡಲಲ್ಲಿ ತಾನು ಮಾತೆಯ ಪಾದವನ್ನು ತೊಳೆಯುತಾಲಿರುವ ವೈಭವದ ನಾಡು..ನಮ್ಮ ಭಾರತದೇಶ. ಮೂರು ಕಡೆ ನೀರಿನಿಂದಲೂ, ಒಂದು ಕಡೆ ನೆಲದಿಂದಲೂ ಆವೃತವಾಗಿದ್ದು, ವಿವಿಧ ಸಂಪನ್ಮೂಲಗಳ ಆಗರವಾಗಿದೆ. ಇಲ್ಲಿ ಹರಿಯುವ ನದಿಗಳು ಮಳೆಗಾಲದಲ್ಲಿ ತುಂಬಿಹರಿಯುತ್ತಿರುವುದರಿಂದ ನದಿಯ ಇಕ್ಕೆಲಗಳಲ್ಲೂ ಫಲವತ್ತಾದ ಮಣ್ಣು ಶೇಖರಣೆಗೊಳ್ಳುತ್ತದೆ. ಇದು ಕೃಷಿಗೆ ಯೋಗ್ಯವಾಗಿದ್ದರಿಂದಲೇ ನದಿ ದಂಡೆಯ ಇಕ್ಕೆಲಗಳಲ್ಲಿಯೂ ರೈತರು ವಾಸವಾಗಿದ್ದಾರೆ. ಇದರಿಂದಾಗಿಯೇ ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು, ಆರ್ಥಿಕ ಅಭಿವೃದ್ಧಿಯಲ್ಲಿಯೂ ಕೃಷಿಯ ಪಾತ್ರ ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕವಾದ ಪ್ರಗತಿಯಲ್ಲಿ ಕಾಂಚಾಣದ ಆಸೆಗಾಗಿ, ರಿಯಲ್ ಎಸ್ಟೇಟ್‌ಗಳ ಭರಾಟೆಯಿಂದ ಕೃಷಿ ಭೂಮಿಗಳೆಲ್ಲಾ ಮಾಯವಾಗುತ್ತಿದೆ. ಶಿಕ್ಷಣ ಕಲಿತ ರೈತನ ಮಗ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗದೆ ವೈಟ್ ಕಾಲರ್‌ನ ಉದ್ಯೋಗವನ್ನರಸಿ ಪಟ್ಟಣ ಸೇರುತ್ತಿದ್ದಾನೆ. ಆಧುನಿಕತೆಯ ಸೋಗಿನಲ್ಲಿರುವ ಹಳ್ಳಿಯ ಮಕ್ಕಳು ಕೂಡ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಮಾಡುವ ಮಾದರಿ ನೋಡುವಂತಾಗಿದೆ. ಕೃಷಿ ಭೂಮಿ ಹೊಂದಿರುವವರು ಕೃಷಿ ಮಾಡಲು ನಿರಾಸಕ್ತಿ ತೋರುವುದರಿಂದಲೋ ಅಥವಾ ಆಸಕ್ತಿ ಇದ್ದರೂ, ಕೃಷಿ ಭೂಮಿಯಿಲ್ಲದವರೂ ಅನಿವಾರ್ಯವಾಗಿ ವಿವಿಧ ಉದ್ಯೋಗವನ್ನರಸಿ ದೇಶ-ವಿದೇಶದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಗೊತ್ತಿದ್ದೊ, ಗೊತ್ತಿಲ್ಲದೆಯೋ ಆಗುವ ಅಚಾತುರ್ಯಗಳಿಂದಾಗಿ ತಾವಿರುವ ಸ್ಥಳದಲ್ಲಿಯೂ ಸಂಚಕಾರ ಒದಗಿದಾಗ ನಾವು ಆ ಕುರಿತು ಮೌನ ವಹಿಸದೆ ಇದು ಯಾಕಾಗಿ ಎಂದು ಪ್ರಶ್ನಿಸಿಕೊಂಡಾಗ ನಮಗೆ ಉತ್ತರದೊರಕುತ್ತದೆ ಎನ್ನುವ ಭಾವನೆ. ಇಂತಹುದೆ ಘಟನೆ ಇತ್ತೀಚಿಗೆ ಗಲ್ಫ್ ರಾಷ್ಟ್ರಗಳ ಸೌದಿ ಅರೇಬಿಯಾದಲ್ಲಿ ಜಾರಿಯಾದ ನಿತಾಕತ್ ಕಾನೂನಿನಿಂದ ಹಲವು ನಿಷ್ಠಾವಂತ ಕಾರ್ಮಿಕರು ತಮ್ಮ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಯಿತಲ್ಲ ಎನ್ನುವ ನೋವು ಮನದಲ್ಲಿ. ತಮ್ಮದಲ್ಲದ ತಪ್ಪಿಗೆ ಒಮ್ಮೆ ನಿಷ್ಠಾವಂತರೂ ಕೂಡ ತಲೆತಗ್ಗಿಸಬೇಕಾಯಿತಲ್ಲ ಎನ್ನುವ ದುಗುಡ.
ಏನಿದು ನಿತಾಕತ್? ಎನ್ನುವ ಸಂಶಯ ಎಲ್ಲರಿಗೂ ಕಾಡುತ್ತದೆ. ಸೌದಿ ಅರೇಬಿಯಾದಲ್ಲಿ ಜಾರಿಯಾದ ನೂತನ ಕಾರ್ಮಿಕ ಕಾನೂನು ಈ ನಿತಾಕತ್. ಈ ಕಾನೂನಿನನ್ವಯ ಸೌದಿ ಅರೇಬಿಯಾದಲ್ಲಿರುವ ಕಂಪೆನಿಗಳು ಶೇ.೧೦ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕಿರುವುದು ಕಡ್ಡಾಯ. ಪ್ರಸಕ್ತ ೨೦ ಲಕ್ಷಕ್ಕೂ ಅಕ ಭಾರತೀಯರು ಸೌದಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ ಎಂದಾಗ ಆಶ್ಚರ್ಯ ಪಡಲೇ ಬೇಕು. ದೇಶದಲ್ಲಿ ವಿದ್ಯಾಭ್ಯಾಸ  ಮುಗಿಸಿ, ತ್ಯಾಗಭೂಮಿ ಭಾರತದಲ್ಲಿ ಜೀವನ ನಿರ್ವಹಣೆ ಮಾಡುವ ಮನಸ್ಸಿಲ್ಲದೇ, ಕುರುಡು ಕಾಂಚಾಣದ ವ್ಯಾಮೋಹದಿಂದ ವಿದೇಶಗಳಿಗೆ ತೆರಳುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ದೇಶದಲ್ಲಿ ವಾಸಿಸುವ ದೇಶಭಕ್ತರು ಒಂದು ಹೊತ್ತಿನ ಗಂಜಿಯಾದರೂ ಕುಡಿದುಕೊಂಡು, ದಿನನಿತ್ಯ ಅಪ್ಪ ಅಮ್ಮನ ಮುಖವನ್ನು ನೋಡುತ್ತಾ ಕುಟುಂಬಿಕರೊಡನೆ ಸಂತೋಷದಿಂದ ಕಾಲ ಕಳೆಯಬಹುದು ಎನ್ನುವ ನಂಬಿಕೆಯಿಂದ ಇಲ್ಲಿಯೇ ನೆಲೆಕಂಡವರು ಅನೇಕರಿದ್ದಾರೆ. ಆದರೆ ವಿದೇಶದ ವ್ಯಾಮೋಹದಿಂದ ಮಾತ್ರ ತಮ್ಮ ಸಂಸಾರದೊಂದಿಗೋ ಅಥವಾ ಏಕಾಂಗಿಯಾಗಿಯೋ ಉದ್ಯೋಗ ಮಾಡಿಕೊಂಡಿದ್ದಾರೆ. ಅವರಿಗೆ ಈ ನಿತಾಕತ್ ಕಾನೂನು ಅನ್ವಯವಾಗುತ್ತಿದೆ. ಸೌದಿ ಸರಕಾರ ನಿತಾಕತ್ ಜಾರಿ ಮಾಡಿದ ಕೂಡಲೇ ಹೆತ್ತಬ್ಬೆಯ ನೆನಪಾಗಿರಬೇಕು. ತಮ್ಮನ್ನು ರಕ್ಷಿಸಲು, ನೆಲೆನಿಲ್ಲಲು ಈ ಭೋಗ ಭೂಮಿಯಲ್ಲಿ ಸ್ಥಳವಿಲ್ಲ. ಕಾಂಚಾಣದ ವ್ಯಾಮೋಹದಿಂದ ಇಲ್ಲಿಯೇ ಇದ್ದರೆ ಜೈಲು ವಾಸವೇ ಗತಿಯೆನ್ನುವುದು ಅರಿವಿಗೆ ಬಂದ ಕೂಡಲೇ ಭಾರತೀಯ ಉದ್ಯೋಗಿಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ಪ್ರಾಯೋಜಕರಿಗೆ ನೀಡಿದ್ದರಿಂದ ತಾಯ್ನಾಡಿಗೆ ಮರಳಲು ಅಗತ್ಯವಿರುವ ತುರ್ತು ಪ್ರಮಾಣಪತ್ರಗಳಿಗಾಗಿ ಭಾರತೀಯ ದೂತಾವಾಸಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಮೇ ೨ ರವರೆಗೆ ೧೮ ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸುತ್ತಿದೆ.
ರಾಮಾಯಣದಲ್ಲೊಂದು ಸನ್ನಿವೇಶವಿದೆ. ಲಂಕೆಗೆ ಸೇತುವೆ ಬಲಿದು ಸೀತಾದೇವಿಯನ್ನು ಬಿಡಿಸಿಕೊಂಡು ಬರುವ ಉದ್ದೇಶದಿಂದ ವಾನರ ಸೇನೆಯೊಂದಿಗೆ ರಾಮಲಕ್ಷ್ಮಣರು ಲಂಕೆ ಪ್ರವೇಶ ಮಾಡುತ್ತಾರೆ. ಘೋರ ಯುದ್ದದ ನಂತರ ದಶಕಂಠ ರಾವಣನನ್ನು ಸಂಹಾರ ಮಾಡುತ್ತಾರೆ. ಸುವರ್ಣಮಯೀ ಲಂಕಾನಗರಿ ನೋಡಿದ ಲಕ್ಷ್ಮಣನಿಗೆ ಅಲ್ಲಿಯ ಸೌಂದರ್ಯ ನೋಡಿ ವ್ಯಾಮೋಹವುಂಟಾಗುತ್ತದೆ. ಆತ ಅಣ್ಣಾ, ಸುವರ್ಣಮಯೀಯಾದ ಲಂಕೆ ನಾವು ಗೆದ್ದು ಕೊಂಡಿದ್ದೇವೆ. ಇಲ್ಲಿಯೇ ನಾವು ನೆಲೆ ನಿಲ್ಲೋಣವೆಂದು ಮನದಿಂಗಿತ ಅರುಹಿದಾಗ ರಾಮ ಹೇಳುವ ಮಾತು ಈ ಸಂದರ್ಭದಲ್ಲಿ ಉಲ್ಲೇಖನೀಯ.
ಹೇ ಲಕ್ಷ್ಮಣಾ, ಅಪೀ ಸ್ವರ್ಣಮಯೀ ಲಂಕಾ ನ ಮೇ ರೋಚತೇ
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಫಿ ಗರೀಯಸಿ//-
(ತಮ್ಮಾ ಲಕ್ಷ್ಮಣಾ ಸುವರ್ಣಮಯೀ ಲಂಕೆಯನ್ನು ನೋಡಿ ರೋಚಕವಾದರೂ, ಹೆತ್ತ ತಾಯಿ, ಹೊತ್ತ ನೆಲ ಸ್ವರ್ಗಕ್ಕಿಂತಲೂ ಮಿಗಿಲು) ಎನ್ನುವ ಶ್ರೀರಾಮನ ಅಮೃತವಾಣಿಯನ್ನು ಅರ್ಥ ಮಾಡಿಕೊಳ್ಳದೇ ದೇಶದ ಗಡಿಯನ್ನು ದಾಟಿ ಹೋಗಿದ್ದವರಿಗೆ  `ನಿತಾಕತ್' ಮೂಲಕ ಎಚ್ಚರಿಕೆ ಸಂದೇಶ ನೀಡಬೇಕಾಯಿತು ಎಂದೆನಿಸುತ್ತಿದೆ. 
ರಾಷ್ಟ್ರದಲ್ಲಿರುವ ನಿರುದ್ಯೋಗ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸೌದಿ ಸರಕಾರವು ನೂತನವಾಗಿ ಜಾರಿಗೊಳಿಸಿದ `ನಿತಾಕತ್' ಕಾರ್ಮಿಕ ಕಾನೂನುನಿಂದಾಗಿ ಅಲ್ಲಿ ಉದ್ಯೋಗದಲ್ಲಿರುವ ಭಾರತೀಯರು ಸಾಮೂಹಿಕವಾಗಿ ನಿರ್ಗಮಿಸುತ್ತಿದ್ದಾರೆ. ಹೊಸ ಕಾರ್ಮಿಕ ನೀತಿಯಿಂದ ಭಾರತೀಯ ಸಮುದಾಯವು ತಕ್ಷಣಕ್ಕೆ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಜಂಟಿ ಕ್ರಿಯಾ ಸಮಿತಿಯೊಂದನ್ನು ರಚಿಸಲು ಮಾತುಕತೆಯ ವೇಳೆ ಎರಡೂ ರಾಷ್ಟ್ರಗಳು ಸಮ್ಮತಿಸಿದ್ದವು. ಕಳೆದ ಕೆಲವು ವರ್ಷಗಳಿಂದ ಸೌದಿಗೆ ತೆರಳಿರುವವರ ಸಂಖ್ಯೆಯಲ್ಲಿ ಅದರಲ್ಲೂ ಮುಸಲ್ಮಾನರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ ಎನ್ನುವುದು ಅಂಕಿ ಅಂಶಗಳಿಂದ ತಿಳಿಯುತ್ತಿದೆ. ಎರಡು ಸರಕಾರಗಳ ಮಾತುಕತೆಯ ಮೂಲಕ ನಿತಾಕತ್‌ನ್ನು ಜುಲೈ೩ ರವರೆಗೆ ವಿಸ್ತರಿಸಲಾಗಿದ್ದು, ಮೂರು ತಿಂಗಳ ರಿಯಾಯಿತಿ ಅವದಿ ನೀಡಲಾಗಿದೆ. ನೂತನ ಕಾರ್ಮಿಕ ಕಾನೂನು ಸೌದಿಯಲ್ಲಿ ಅವದಿ ಮೀರಿ ನೆಲೆಸಿರುವ ಹಾಗೂ ೧೯೯೭ರಿಂದಲೂ ತಾಯ್ನಾಡಿಗೆ ಭೇಟಿ ನೀಡದಿರುವ ಭಾರತೀಯರನ್ನು ತವರಿಗೆ ಕಳುಹಿಸಲು ಸೂಕ್ತವಾಗಿದೆ.
ಅವದಿ ಮುಕ್ತಾಯಗೊಂಡರೂ ಸೌದಿಯಲ್ಲೆ ಅಕ್ರಮವಾಗಿ ಉಳಿದುಕೊಂಡಿರುವ ಭಾರತೀಯರು ಈ ಹೆಚ್ಚುವರಿ ಕಾಲಮಿತಿಯೊಳಗೆ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು ಅಥವಾ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು. ಇವೆರಡೂ ಸಾಧ್ಯವಾಗದಿದ್ದಲ್ಲಿ ಅಂತಹವರು ಯಾವುದೇ ದಂಡವಿಲ್ಲದೆ ತಾಯ್ನಾಡಿಗೆ ಮರಳಬಹುದೆನ್ನುವ ಉದಾರತೆ ತೋರಿಸಿದೆ. ತಮ್ಮ ಉದ್ಯೋಗಗಳನ್ನು ಕ್ರಮಬದ್ಧಗೊಳಿಸಲು ವಿಫಲರಾಗಿರುವ ಭಾರತೀಯರು ಸೌದಿ ತೊರೆಯಲು ಅಗತ್ಯವಿರುವ ತುರ್ತು ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ೩ ರ ಅಂತಿಮ ಗಡುವು ಮುಕ್ತಾಯ ಗೊಳ್ಳುತ್ತಿರುವಂತೆಯೇ ಸೂಕ್ತ ದಾಖಲೆ ಪತ್ರಗಳಿಲ್ಲದ ವಿದೇಶಿಯರು ಜೈಲಿಗೆ ತಳ್ಳಲ್ಪಡುವರಲ್ಲದೆ, ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯ ಗಂಟೆಯನ್ನು ಕೂಡ ನೀಡಿದೆ. ಅಧಿಕೃತ ಮೂಲಗಳ ಪ್ರಕಾರ ಸಂಸ್ಕರಣೆಗೆ ಒಳಪಡಿಸಲಾದ ಒಟ್ಟು ೫೬,೭೩೪ ಅರ್ಜಿಗಳಲ್ಲಿ ೨೧,೩೩೧ ಅರ್ಜಿಗಳು ಉತ್ತರ ಪ್ರದೇಶ ಮೂಲದವರದ್ದಾಗಿದೆ. ಅಲ್ಲದೇ ಕೇರಳಿಗರ ಅರ್ಜಿಗಳು ಕೂಡ ಅಧಿಕ ಪ್ರಮಾಣದಲ್ಲಿವೆಯಂತೆ. ರಾಷ್ಟ್ರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಗೆ ಯಾವುದೇ ದಂಡನೆಯಿಲ್ಲದೆ ತಾಯ್ನಾಡಿಗೆ ಮರಳಲು ೧೯೯೭ ರ ಬಳಿಕ ಸೌದಿ ಅರೇಬಿಯವು ಇದೇ ಮೊದಲ ಬಾರಿಗೆ ಒಂದು ಅವಕಾಶ ನೀಡುತ್ತಿದೆ. ಈ ರೀತಿಯಾಗಿ ಸೌದಿ ಸರಕಾರ ಅಕ್ರಮಿಗಳಿಗೂ ಸಹಾಯ ಮಾಡಿ ಭ್ರಷ್ಠಾಚಾರಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲಿಂದ ಭಾರತಕ್ಕೆ ಬಂದ ನಂತರ ಇಲ್ಲಿನ ಘನ ಸರ್ಕಾರ ವಿಮಾನ ನಿಲ್ದಾಣದಿಂದ ಹಿಡಿದು, ಅವರ ಮನೆ ಬಾಗಿಲ ಹೊಸ್ತಿಲನ್ನು ತುಳಿಯುವ ತನಕದ ಎಲ್ಲಾ ಖರ್ಚುಗಳನ್ನು ಭರಿಸಲು ನಿರ್ಧರಿಸಿದೆ. ಭ್ರಷ್ಠರಿಗೆ ಇಷ್ಟೊಂದು ಮಣೆಹಾಕುವ ಸರಕಾರ ಇಂತವರನ್ನು ಯಾಕಾಗಿ ಅಲ್ಲಿಂದ ಕಳುಹಿದ್ದಾರೆ ಎನ್ನುವ ಸತ್ಯವನ್ನು ತಿಳಿಯಲು ಮುಂದಾಗಿದ್ದರೆ ಅವರಿಗೆ ರಾಜಮರ್‍ಯಾದೆ ನೀಡುತ್ತಿರಲಿಲ್ಲ. ದೇಶದ ಕೀರ್ತಿಯನ್ನು ಜಾಗತಿಕವಾಗಿ ಹೆಚ್ಚುವಂತೆ ಮಾಡಿದ ದೇಶಭಕ್ತರಿಗೆ ಸಿಗದ ಮರ್‍ಯಾದೆ, ಅಕ್ರಮವಾಗಿ ನೆಲೆಸಿ, ದೇಶದಿಂದ ಹೊರಹಾಕಿದವರಿಗೆ ಇಲ್ಲಿ ರಾಜಮರ್‍ಯಾದೆ ಎಂತಹ ನಾಚಿಕೆಗೇಡಿನ ವಿಷಯ.  
ಕಂಪೆನಿಗಳಲ್ಲಿ ಸ್ಥಳೀಯರಿಗೆ ಶೇ. ೧೦ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸೌದಿ ಸರಕಾರ ಕೆಲವು ತಿಂಗಳ ಹಿಂದೆ ನಿತಾಕತ್ ಕಾರ್ಮಿಕ ಕಾನೂನು ಜಾರಿಗೊಳಿಸಲು ನಿರ್ಧರಿಸಿತ್ತು. ಅದರಂತೆ ಅಲ್ಲಿನ ಸರಕಾರಿ ಅಧಿಕಾರಿಗಳು ಫೆಬ್ರವರಿ ತಿಂಗಳಲ್ಲಿ ವಿವಿಧ ಕಂಪೆನಿಗಳಿಗೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ಉದ್ಯೋಗ ಮಾಡುತ್ತಿದ್ದ ಹಲವರನ್ನು ಬಂದಿಸಿದ್ದು, ಇನ್ನು ಕೆಲವರು ದಾಳಿ ವೇಳೆ ತಪ್ಪಿಸಿಕೊಂಡಿದ್ದರು. ಈತನ್ಮಧ್ಯೆ ಕೆಲವರು ಬಂಧನ ಭೀತಿಯಿಂದ ತವರೂರಿಗೆ ತೆರಳಿದ್ದರು. ಸೌದಿಯ ಈ ಕಾನೂನಿನ ಕುಣಿಕೆಗೆ ಬಿದ್ದವರಲ್ಲಿ ಹೆಚ್ಚಿನವರು ಭಾರತೀಯರೇ. ಸಮಸ್ಯೆಗೆ ಸಿಕ್ಕವರ ಕುಟುಂಬಿಕರು ಪರಿಹಾರ ಕಲ್ಪಿಸಲು ಸರಕಾರದ ಮೇಲೆ ಒತ್ತಯಿಸಿದ್ದರು. ಭಾರತ ಸರಕಾರದ ಮನವಿಗೆ ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ  ನಿತಾಕತ್ ಕಾನೂನಿನ ಕೆಲವು ನಿಯಮದಲ್ಲಿ ಸಡಿಲಿಕೆ ಮಾಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಕಾನೂನು ಬಾಹಿರವಾಗಿ ಉದ್ಯೋಗ ಪಡೆದವರಿಗೆ ಅದರಲ್ಲೂ ಕಾರ್ಮಿಕ ವರ್ಗಕ್ಕೆ ಕ್ಷಮಾದಾನ. ಒಂದು ಕಂಪೆನಿಯಿಂದ ಮತ್ತೊಂದು ಕಂಪೆನಿಗೆ ತೆರಳಿ ಕೆಲಸ ಮಾಡುವ ಅವಕಾಶ, ಅರ್ಹ ಮನೆಗೆಲಸದವರನ್ನು ಕಚೇರಿ ಕೆಲಸಕ್ಕೂ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಅಲ್ಲದೆ ಬಂಧನ ಭೀತಿ ಮತ್ತು ಆರಂಭದಲ್ಲಿ ಬಿಗಿ ಕಾನೂನಿಗೆ ಸಿಲುಕಿ ಉದ್ಯೋಗ ಕಳೆದುಕೊಂಡು ಸ್ವದೇಶಕ್ಕೆ ತೆರಳಿದ್ದವರು ಕೂಡ ಮರಳಲು ಅವಕಾಶವಿದೆ. ಹಕಾಮ ಶುಲ್ಕ, ಉದ್ಯೋಗ ಅನುಮತಿ ಶುಲ್ಕ ಹಾಗೂ ದಂಡ ಪಾವತಿಯಿಂದ ವಿನಾಯಿತಿ ನೀಡಿದ್ದಾರೆ.
ಅದಕ್ಕಿಂತಲೂ ಅಚ್ಚರಿಯೆನ್ನುವಂತೆ ೨೦೦೮ ರ ಜುಲೈ೩ ಮುಂಚೆ ಹಜ್ ಉಮ್ರ ವೀಸಾದಲ್ಲಿ ತೆರಳಿದ ಸಾವಿರಾರು ಮಂದಿ ತಾಯ್ನಾಡಿಗೆ ಮರಳದೆ ಅಲ್ಲೇ ಕೆಲಸ ಮಾಡಿಕೊಂಡಿದ್ದಾರೆ ಎನ್ನುವ ಅಂಶವೊಂದು ಬೆಳಕಿಗೆ ಬಂದಿದೆ. ಧಾರ್ಮಿಕ ಕ್ಷೇತ್ರಗಳ ಸಂದರ್ಶನವೆನ್ನುವುದಾಗಿ ಅನೇಕ ಮುಸ್ಲಿಮರು ಮಕ್ಕಾ ಮದಿನಾಕ್ಕೆ ಹಜ್ ಯಾತ್ರೆಗೆ ತೆರಳುತ್ತಾರೆ. ಗೋಹತ್ಯೆ ಸೇರಿದಂತೆ ಇತರ ಪಾಪಕೃತ್ಯಗಳಲ್ಲಿ ಭಾಗಿಯಾದ ಇವರು ಪುಣ್ಯ ಸಂಪಾದನೆಗಾಗಿ ಧಾರ್ಮಿಕತೆಯ ಮುಖವಾಡ ಧರಿಸಿ, ತಮ್ಮ ಪಾಪಕೃತ್ಯಗಳನ್ನು ಕಳೆಯಲು ಹಜ್‌ಯಾತ್ರೆಗೆ ತೆರಳುತ್ತಾರೆ. ಧಾರ್ಮಿಕ ಕ್ಷೇತ್ರದ ದರ್ಶನ ಮಾಡಿಕೊಂಡು ತಿರುಗಿ ಬಂದಿದ್ದರೆ ಭಾರತಮಾತೆ ಕ್ಷಮಿಸುತ್ತಿದ್ದಳೆನೋ? ಅಥವಾ ಹತ್ಯೆಯಾದ ಗೋಮಾತೆಯ ಆತ್ಮ ಈ ಪಾಪಿಗೆ ಬುದ್ಧಿ ಬಂದಿರಬಹುದು ಎಂದು ಕ್ಷಮೆ ನೀಡುತ್ತಿದ್ದಿರಬಹುದು? ಯಾಕೆಂದ್ರೆ ಆಕೆ ಸಹನೆಯ ಪ್ರತಿರೂಪ. ಭಾರತ ಸರಕಾರದ ಹಣದಿಂದ ಹಜ್‌ಯಾತ್ರೆಗೆಂದು ತೆರಳಿದ್ದರೂ, ಅದನ್ನು ಮರೆತು ಅಲ್ಲಿಯೇ ನೆಲೆಗೊಂಡವರು ಅನೇಕ ಮಂದಿಯಿದ್ದಾರೆ. ಕಾಂಚಾಣದ ಆಸೆ ಹಾಗೂ ವಿದೇಶೀ ವ್ಯಾಮೋಹದಿಂದಲೂ ಕೂಡ ಇಂತಹ ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗಲು ಮನಮಾಡುತ್ತಾರೆ. ಇದರಿಂದ ಸಭ್ಯರೂ ಕೂಡ ತಲೆತಗ್ಗಿಸುವಂತ ಪರಿಸ್ಥಿತಿ. 
ಹೆಂಡಿರೇತಕೆ, ಮಕ್ಕಳೇತಕೆ, ಭಂಡಿ ತುಂಬಿದ ಧನವಿದೇತಕೆ
ಯಮನವರು ಬಂದು ಚಂಡಪಾಶದಿ ಕಟ್ಟಿ ಕೊಂಡು ಹೋ-ಹಂದಿನಲಿ ಕಂಡು ಬಿಡಿಸುವವರುಂಟೆ ಎಂದು ಪ್ರಾಜ್ಞರು ಹೇಳಿದ್ದಾರೆ. ಇದನ್ನೆಲ್ಲಾ ತಿಳಿದುಕೊಂಡಿದ್ದರೂ, ದಿನನಿತ್ಯದ ಜೀವನ ನಿರ್ವಹಣೆಗೆ ಬೇಕಾಗುವ ಹಣಕ್ಕಿಂತ ಅತ್ಯಧಿಕ ಆಸ್ತಿ ಸಂಪಾದಿಸಲು ಹುಟ್ಟಿದ ದೇಶವನ್ನೇ ಬಿಟ್ಟು ಹೋಗಿ ವಿದೇಶಗಳಲ್ಲಿ ನೆಲೆಯಾಗುತ್ತಾರೆ. ಅಲ್ಲಿ ನಿಯತ್ತಿನಿಂದ ಕೆಲಸ ನಿರ್ವಹಿಸಿದರೆ ಅಲ್ಲಿಯೂ ಕೂಡ ವಿಶೇಷ ಮರ್‍ಯಾದೆ ದೊರಕುತ್ತದೆ. ಅಲ್ಲಿ ಹೋಗಿ ತಮ್ಮ ಕೆಟ್ಟ ಚಾಳಿಯನ್ನು ಮುಂದುವರಿಸಿದರೆ, ಅಲ್ಲಿನ ಕಾನೂನು ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದರೆ ಅವರಿಗೆ ಜೈಲು, ಗಡಿಪಾರು ಅಥವಾ ಶಿರಚ್ಛೇದನದಂತ ಕಠಿಣ ಶಿಕ್ಷೆಯನ್ನು ವಿಧಿಸುತ್ತಾರೆ ಎನ್ನುವುದಕ್ಕೆ ಕೆಳಗಿನ ಅಂಕಿಅಂಶಗಳೇ ಸಾಕ್ಷಿ. 
ವಿಶ್ವದ ೮೦ ದೇಶಗಳ ಜೈಲಿನಲ್ಲಿ ೬,೫೦೦ಕ್ಕೂ ಅಧಿಕ ಭಾರತೀಯರು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆಶ್ಚರ್ಯ ಆದರೂ ಸತ್ಯ. ಅವರ ಪೈಕಿ ಅರ್ಧದಷ್ಟು ಮಂದಿ ಮುಸಲ್ಮಾನರು ವಾಸಿಸುವ ಮೂರು ಕೊಲ್ಲಿ ದೇಶಗಳಲ್ಲಿದ್ದಾರೆ. ಕುವೈತ್‌ನಲ್ಲಿ ೧,೬೯೧, ಸೌದಿ ಅರೇಬಿಯದಲ್ಲಿ ೧,೧೬೧ ಮತ್ತು ಯುಎಇಯಲ್ಲಿ ೧,೦೧೨ ಕೈದಿಗಳಿದ್ದಾರೆ.
ನೆರೆಯ ದೇಶಗಳ ಪೈಕಿ ದೇಶದ ಬದ್ದ ವೈರಿ ಪಾಕಿಸ್ತಾನದಲ್ಲಿ ೨೫೩, ಚೀನಾದಲ್ಲಿ ೧೫೭, ನೇಪಾಳದಲ್ಲಿ ೩೭೭, ಶ್ರೀಲಂಕಾದಲ್ಲಿ ೬೩, ಇಟಲಿಯಲ್ಲಿ ೧೨೧, ಬ್ರಿಟನ್‌ನಲ್ಲಿ ೪೨೬, ಅಮೇರಿಕಾದಲ್ಲಿ ೧೫೫ ಕೈದಿಗಳಿದ್ದಾರೆ. ಈ ಮಾಹಿತಿಯನ್ನು ಹ್ಯೂಮನ್ ರೈಟ್ಸ್ ಡಿಫೆನ್ಸ್ ಫೋರಂ ಎನ್ನುವ ಎನ್‌ಜಿಒ ಮಾಹಿತಿ ಹಕ್ಕಿನ ಮೂಲಕ ಪಡೆದಿದೆ. ವಿದೇಶಿ ಜೈಲುಗಳಲ್ಲಿ ೬,೫೬೯ ಭಾರತೀಯರು ಇರುವುದನ್ನು ಮಾಹಿತಿ ಹಕ್ಕು ನಿರ್ಧಿಷ್ಟವಾಗಿ ತಿಳಿಸಿದೆ. ಆದರೆ ಭಾರತದ ಜೈಲಿನಲ್ಲಿ ವಿದೇಶಿಯರು ಬೆರಳೆಣಿಕೆಯಷ್ಟಿದ್ದಾರೆ ಎಂದಾಗ ವಿದೇಶಿಗರು ತಪ್ಪು ಮಾಡಿಲ್ಲ ಎನ್ನುವ ಸೂಚಕವೇ?
ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಈ ಮಾಹಿತಿಯನ್ನು ಪಡೆದಿದ್ದರೂ, ಇದು ಬದಲಾಗುತ್ತಾ ಹೋಗುತ್ತದೆ. ಆದರೆ ಕೈದಿಗಳ ಕುರಿತು ಹಾಗೂ ಅವರು ಎದುರಿಸುತ್ತಿರುವ ಆರೋಪಗಳ ಬಗ್ಗೆ ವಿವರವನ್ನು ನೀಡಿಲ್ಲ. ಸಣ್ಣಪುಟ್ಟ ಅಪರಾಧಗಳು, ಮಾದಕವಸ್ತು ಸಾಗಣೆ ಮತ್ತು ಗೃಹ ಹಿಂಸೆಗಳಿಗಾಗಿ ಭಾರತೀಯರು ಯುರೋಪ್‌ನಲ್ಲಿ ಜೈಲಿಗೆ ಹೋಗುತ್ತಾರೆ ಎಂದು ವಿಶ್ವಸಂಸ್ಥೆಗೆ ಭಾರತದ ಮಾಜಿ ರಾಯಭಾರಿ ಟಿ.ಪಿ. ಶ್ರೀನಿವಾಸನ್ ಹೇಳಿದ್ದು, ಕೊಲ್ಲಿ ದೇಶಗಳಲ್ಲಿರುವ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ದೋಷಪೂರಿತ ಗುತ್ತಿಗೆಗಳು, ಅಕ್ರಮ ವಾಸ್ತವ್ಯ ಮತ್ತು ವಲಸೆಗಾಗಿಯೇ ಬಂದಿಯಾಗಿದ್ದಾರೆ ಎಂದಿದ್ದರು. ಯುಎಇಯ ಭಾರತೀಯ ರಾಯಭಾರ ಕಚೇರಿ ಮೂಲಗಳ ಪ್ರಕಾರ ೧೨ ದಿನಗಳ ಅವಧಿಯಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಯುಎಇಗೆ ಆಗಮಿಸಿ ಅಲ್ಲಿನ ನಿಯಮವನ್ನು ಉಲ್ಲಂಘಿಸಿದವರಲ್ಲಿ ಆಂದ್ರಪ್ರದೇಶ ೧೫೦, ತಮಿಳು ನಾಡು ೧೩೦, ಕೇರಳ ೧೨೪, ಉಳಿದಂತೆ ಪಂಜಾಬ್, ರಾಜಾಸ್ತಾನ್ ಮತ್ತು ಉ.ಪ್ರದೇಶದವರು ಸೇರಿದ್ದಾರೆ. ಪಾಸ್‌ಫೋರ್ಟ್ ಕಳೆದುಕೊಂಡವರು, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು, ನಿಯಮ ಉಲ್ಲಂಘನೆ ಮಾಡಿದವರು, ವೀಸಾ ರದ್ದುಗೊಂಡವರು ಹಲವು ಬಗೆಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಈ ನಿತಾಕತ್ ಕಾರ್ಮಿಕ ಕಾನೂನು, ದಾಖಲೆಗಳು ಸರಿಯಾಗಿ ಜೋಡಿಸಿಕೊಂಡು ನಿಯಮ ಉಲ್ಲಂಘನೆ ಮಾಡದೇ ಬದುಕುವ ಯಾವುದೇ ಭಾರತೀಯನಿಗೂ ಅನ್ವಯವಾಗುವುದಿಲ್ಲ. ಅವರಿಗೆ ಮೊದಲಿನಂತೆ ಸಕಲ ಮಾನ-ಮರ್ಯಾದೆಗಳು ದೊರಕುತ್ತವೆ ಎನ್ನುವ ಸತ್ಯವನ್ನು ಅರಿಯಬೇಕಿದೆ.
ಹ್ವಾಯ್ ಇಲ್ಕೇಣಿ ಮರ್ರೆ: ನಮ್ಮ ದೇಶದಲ್ಲಿರುವ ಕಾನೂನು, ಕಟ್ಟಳೆಗಳು ಭಾರತೀಯನಿಗೆ ಮಾತ್ರ ಅನ್ವಯವಾಗುತ್ತದೆಯೇ ಎನ್ನುವ ಸಂಶಯ. ವಿದೇಶಿಗನೊಬ್ಬ ಬಂದು ವರ್ಷದೊಳಗೆ ಆತನಿಗೆ ಬೇಕಾದ ಪಡಿತರ ಚೀಟಿ, ಪಾಸ್‌ಪೋರ್ಟ್, ಮತಗುರುತಿನ ಚೀಟಿ  ಸೇರಿದಂತೆ ಆ ಕಾರ್ಡು-ಇ ಕಾರ್ಡುಗಳನ್ನು ಮಾಡಿಕೊಳ್ಳುತ್ತಾನೆ. ಆದರೆ ಇಲ್ಲಿ ಹತ್ತಾರು ವರ್ಷಗಳಿಂದ ಬದುಕುತ್ತಿರುವ ಭಾರತೀಯನಿಗೆ ಮಾತ್ರ ಯಾವ ಸೌಲಭ್ಯವೂ ದೊರಕುವುದಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲಿ ಕಾರ್ಮಿಕರಿಗೆ ಉದ್ಯೋಗ ಭರವಸೆ ನೀಡುವ ನಿಟ್ಟಿನಲ್ಲಿ ನಿತಾಕತ್ ಕಾರ್ಮಿಕ ಕಾನೂನು ಜಾರಿ ತಂದು ವಿದೇಶಿಗರನ್ನು ತವರಿಗೆ ಅಟ್ಟುತ್ತಿದ್ದಾರೆ. ಭಾರತದಲ್ಲಿಯೂ ಇಂತಹ ಕಾನೂನು ಜಾರಿಗೊಳಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸೌದಿಯಲ್ಲಿ ಇಂತಹ ಕಾನೂನು ಜಾರಿಗೆ ತಂದು ನಮ್ಮವರ ಭಾರತೀಯತೆಯನ್ನು ಜಾಗೃತಗೊಳಿಸಬೇಕಾಯಿತಲ್ಲವೇ? ನಾವೆಲ್ಲಾ ಭಾರಿ ಬುದ್ಧಿವಂತರೆನ್ನುವುದು ಎಷ್ಟರಮಟ್ಟಿಗೆ ಸರಿ ಹೇಳಿ?


ದೇಶದ ಗೌರವ-ಕೀರ್ತಿಯನ್ನು ಜಗದಗಲಕ್ಕೆ ವಿಸ್ತಾರಗೊಳಿಸಿದ ಭಾರತೀಯ ಕಬಡ್ಡಿ ತಂಡ ವಿಶ್ವಕಪ್‌ನಲ್ಲಿ ಗೆದ್ದು ದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರನ್ನು ಆಮಂತ್ರಿಸಲು ಬೆರಳೆಣಿಕೆಯಷ್ಟು ಮಂದಿ. ಕ್ರೀಡಾಪಟುಗಳೇ ಅವರವರ ವಸ್ತುಗಳನ್ನು ಕೊಂಡು ಹೋಗಲು ಸರಕಾರದ ಯಾವುದೇ ವ್ಯವಸ್ಥೆಯಿಲ್ಲದೆ ಸ್ವಂತ ಖರ್ಚಿನಲ್ಲಿ ಮನೆಗೆ ತೆರಳಿದ ಘಟನೆ ನೆನಪಿನಿಂದ ಮಾಸಿಲ್ಲ. ಆದರೆ ಕಾನೂನು ಬಾಹಿರವಾಗಿ ವಿದೇಶದಲ್ಲಿ ನೆಲೆಯಾಗಿ ` ನಿತಾಕತ್' ಕಾರ್ಮಿಕ ಕಾನೂನಿನಿಗೆ ಮಣಿದು ದೇಶಕ್ಕೆ ಬಂದಾಗ ಇಲ್ಲಿನ ಘನ ಸರಕಾರದಿಂದ ಅವರಿಗೆ ರಾಜಮರ್‍ಯಾದೆ. ಅವರು ವಿಮಾನ ನಿಲ್ದಾಣದಿಂದ ಮನೆಯ ತನಕ ತೆರಳುವ ಎಲ್ಲಾ ಖರ್ಚನ್ನು ಸರಕಾರ ಭರಿಸುತ್ತದೆಯಂತೆ? ದೇಶದ ಕೀರ್ತಿಯನ್ನು ಹೆಚ್ಚಿಸಿದವರಿಗೆ ಅವಮಾನ-ದೇಶಕ್ಕೆ ಅಪಕೀರ್ತಿ ತಂದವರಿಗೆ ಸಮ್ಮಾನ...ಎಂಥಾ ಲೋಕವಯ್ಯ

No comments:

Post a Comment