Friday 22 November 2013

ಲವ್ ಜಿಹಾದ್‌ಗೆ ಪೂರಕ ಅಂಶ-ಪ್ರೀತಿಸಿ ಮದುವೆಯಾದ ಜೋಡಿ-ಭಯೋತ್ಪಾದನೆಯಲ್ಲಿ ಭಾಗಿ!
ಸೌಂದರ್ಯ ಮರೆಮಾಚುವ ಬುರ್ಖಾ-ಮಕ್ಕಳನ್ನು ಹಡೆಯುವ ಯಾಂತ್ರಿಕ ಬದುಕು ಬೇಕೆ-ಹಿಂದೂ ಹೆಣ್ಣು ಮಕ್ಕಳೇ ಆಲೋಚಿಸಿ ಹೆಜ್ಜೆ ಹಾಕಿ.
ಆಯೆಷಾ ಬಾನು..ಮಂಗಳೂರಿನಲ್ಲಿ ವಾಸವಾಗಿದ್ದ ಮೂರು ಮಕ್ಕಳ ತಾಯಿ ಕೆಲವೇ ಘಂಟೆಗಳ ಅಂತರದಲ್ಲಿ ದೇಶಾದ್ಯಂತ ಪ್ರಚಾರ ಪಡೆದವಳು. ಭಯೋತ್ಪಾದಕರಿಗೆ ಹಣ ವರ್ಗಾವಣೆ ಮಾಡಿದ ಆಯೆಷಾ ನರೇಂದ್ರ ಮೋದಿಯ ಹೂಂಕಾರ್ ರ್‍ಯಾಲಿಗೆ ಬಾಂಬ್ ಇರಿಸಲು ಪರೋಕ್ಷವಾಗಿ ಕಾರಣವಾಗಿದ್ದಾಳೆ ಎನ್ನುವ ದಾಖಲೆಗಳ ಮೂಲಕ ಜೈಲು ಸೇರಿದ್ದಾಳೆ. ಲವ್ ಜಿಹಾದ್‌ನ ಪರಿಣಾಮವಾಗಿ ಮುಸ್ಲಿಂ ಯುವಕನೊರ್ವ ಈಕೆಯನ್ನು ಮದುವೆಯಾಗಿ ಬುರ್ಖಾದೊಳಗೆ ಸೌಂದರ್ಯ ಮರೆಮಾಚುವಂತೆ ಮಾಡಿ, ಆಕೆಯ ಮುಗ್ದತೆಯನ್ನು ದುರ್ಬಳಕೆ ಮಾಡಿ, ಭಯೋತ್ಪಾದನಾ ಕೃತ್ಯಗಳಿಗೆ ಬಳಸಿಕೊಂಡಿದ್ದ.
ಹಿಂದು ಹೆಣ್ಣುಮಕ್ಕಳನ್ನು ಮುಸ್ಲಿಂ ಯುವಕರು ಪ್ರೀತಿಯ ನಾಟಕವಾಡಿ, ಮದುವೆಯಾಗಿ ಶೀಲವನ್ನೆಲ್ಲಾ ಸೂರೆಗೊಂಡ ನಂತರ ಭಯೋತ್ಪಾದನಾ ಚಟುವಟಿಕೆಗಳಿಗೆ, ವೇಶ್ಯಾವಾಟಿಕೆಗೆ ತಳ್ಳುವ ಲವ್‌ಜಿಹಾದ್ ಜಾಲ ಸಕ್ರೀಯವಾಗಿದೆ ಎಂದು ರಾಷ್ಟ್ರೀಯವಾದಿ ಸಂಘಟನೆಯೊಂದು ಕಳೆದ ೧೦ ವರ್ಷಗಳ ಹಿಂದೆ ವರದಿ ಮಾಡಿತ್ತು. ಈ ಸಂದರ್ಭದಲ್ಲಿ ಎಡಪಂಥಿಯ ಸಂಘಟನೆಗಳು ಅವರಿಗೆ ಕಣ್ಣು ಕಾಣುವುದಿಲ್ಲ. ಪ್ರೀತಿ ಮಾಡುವುದೇ ತಪ್ಪೆ..ಮಾಡಿದವರು ಮದುವೆಯಾಗಬಾರದೆ ಎನ್ನುವ ಎಡಬಿಡಂಗಿತನದ ಹೇಳಿಕೆ ನೀಡಿ, ಲವ್‌ಜಿಹಾದ್ ಸರಿ ಎನ್ನುವಂತೆ ತೇಪೆ ಹಚ್ಚಿದ್ದರು. ರಾಷ್ಟ್ರೀಯವಾದಿ ಸಂಘಟನೆಯ ಹೇಳಿಕೆಗೆ ಸಾಕ್ಷಿಯಾಗಿ ಭಯೋತ್ಪಾದಕರಿಗೆ ಹಣ ಒದಗಿಸುವ ಕೊಂಡಿ ಆಯೆಷಾ ಬಾನು ಸಿಕ್ಕಿಹಾಕಿಕೊಳ್ಳುವ ಮೂಲಕ ಆ ವರದಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಯಾರೀಕೆ ಆಯೇಷಾ?
ಕೊಡಗಿನ ವಿರಾಜಪೇಟೆಯ ದೇವಣಗೇರಿ ಗ್ರಾಮದ ದಲಿತ ಕುಟುಂಬಕ್ಕೆ ಸೇರಿದ ಪುತ್ತೊಳಿ ೧೯೯೫ರಲ್ಲಿ ಮಡಿಕೇರಿಯಲ್ಲಿ ಕಾರಿನ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಜಪೆಯ ನಿವಾಸಿ ಜುಬೇರ್ ಮಹಮ್ಮದ್‌ನನ್ನು ಪ್ರೀತಿಸಿ ಮದುವೆಯಾಗಿದ್ದಳು ಎನ್ನುವುದಕ್ಕಿಂತ ಲವ್‌ಜಿಹಾದ್‌ಗೆ ಬಲಿಯಾಗಿದ್ದಳು ಎನ್ನುವುದೇ ಸೂಕ್ತ. ಮದುವೆಯಾಗುವವರೆಗೆ ಪುತ್ತೊಳಿಯಾಗಿದ್ದ ಆಕೆ ಮದುವೆಯಾದ ನಂತರ ಆಯೆಷಾಬಾನುವಾಗಿ ಪರಿವರ್ತನೆಗೊಂಡಿದ್ದಳು. ಹಿಂದು ಹೆಣ್ಣುಮಕ್ಕಳು ಮದುವೆಯಾದ ನಂತರ ಜುಬೇರ್ ಯಾಕೆ ರಾಮ, ಕೃಷ್ಣನಾಗಿ ಪರಿವರ್ತನೆಯಾಗಿಲ್ಲ. ಪುತ್ತೋಳಿಯೇ ಯಾಕೆ ಆಯೇಷಾ ಆಗಿ ಪರಿವರ್ತಿತವಾದಳು..ಇದುವೇ ಲವ್‌ಜಿಹಾದ್. ಆಕೆಯನ್ನು ಅಲ್ಲಿಂದ ಕರೆತಂದ ಜುಬೇರ್ ಬಜ್ಪೆಯ ಸಮೀಪ ಬಾಡಿಗೆ ಮನೆಯಲ್ಲಿ ಸಂಸಾರ ಪ್ರಾರಂಭಿಸಿದ್ದ. ಆರಂಭದಲ್ಲಿ ಚಿನ್ನ-ರನ್ನ ಎಂದು ಕೊಂಡಾಡುತ್ತಿದ್ದ ಜುಬೇರ್‌ಗೆ ದಿನ ಕಳೆದಂತೆ ಆಯೆಷಾಳ ಬಗೆಗಿನ ಒಲವು ಕಡಿಮೆಯಾಗತೊಡಗಿತು. ಈತನ್ಮಧ್ಯೆ ತಂದೆ-ತಾಯಿಯೊಂದಿಗೆ ಬೇರೆಯಾಗಿದ್ದ ಜುಬೇರ್ ಅವರ ಮನೆಗೆ ನಿತ್ಯ ಹಾಜರಿ ಹಾಕತೊಡಗಿದ್ದ. ಹಿಂದು ಸೊಸೆಯನ್ನು ಅವರು ಸ್ವೀಕರಿಸಲು ಜುಬೇರ್‌ನ ಪೋಷಕರು ಸಿದ್ದರಿಲ್ಲದೇ, ಬೇರೆ ಮದುವೆಯಾಗಲು ಒತ್ತಾಯ ಹಾಕುತ್ತಿದ್ದರಂತೆ? ಅದಕ್ಕೆ ಜುಬೇರ್ ಅವರು ನೋಡಿದ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದನಂತೆ? ಅಥವಾ ಆಯೆಷಾಳ ಮೇಲಿನ ಒಲವು ಕಡಿಮೆಯಾದಂತೆ, ದಿನನಿತ್ಯ ಊಟ ಮಾಡಿದ ಆಹಾರ ರುಚಿಕಾಣದೆ, ಕಂಗೆಟ್ಟಿದ್ದ ಜುಬೇರ್ ಎರಡನೇ ಮದುವೆಯಾಗಿದ್ದ ಎನ್ನುವುದು ಸ್ಪಷ್ಟ. ಹೊಸ ಹೆಂಡತಿ ಜುಬೇರ್‌ನ ಮನೆಯ ಪ್ರೀತಿಯ ಸೊಸೆಯಾಗಿ ಆತನ ಮನೆಯಲ್ಲಿ ವಾಸಿಸಲು ಮಾಡಿಕೊಟ್ಟಿದ್ದ ಎನ್ನುವಾಗ ಪುತ್ತೋಳಿಯ ಮೇಲಿಟ್ಟಿದ್ದ ಅವನ ಪ್ರೀತಿ ಯಾವ ರೀತಿಯದ್ದು ಎನ್ನುವುದು ಸ್ಪಷ್ಟವಲ್ಲವೇ?
ಗಂಡನ ಎರಡನೇ ಮದುವೆಯನ್ನು ಅಸಹಾಯಕಳಾಗಿ ಸಹಿಸಿಕೊಂಡು ಗಂಡನೊಂದಿಗೆ ಹೊಂದಾಣಿಕೆಯಲ್ಲಿ ಸಂಸಾರ ನಡೆಸುತ್ತಿದ್ದಳು. ಈತನ್ಮದ್ಯೆ ಎರಡು ಸಂಸಾರದ ಭಾರವನ್ನು ಹೊರಲಾರದೆ ಜುಬೇರ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಕಾನೂನಿನ ತೊಡಕಿಲ್ಲದಿರುವ ಮುಸ್ಲಿಂ ಸಮುದಾಯದಲ್ಲಿ ಮಕ್ಕಳ ಹೆರುವಿಕೆಗೆ ಯಾವುದೇ ಆರ್ಥಿಕ ಸಂಕಷ್ಟ ಅಡ್ಡಿಯಾಗಿಲ್ಲ. ಆಯಿಷಾ ಎರಡನೇ ಮಗುವಿನ ತಾಯಿಯಾದಳು. ನಂತರ ಜುಬೇರ್ ಸೌದಿ ಅರೇಬಿಯಾಕ್ಕೆ ಹೊರಟು ನಿಂತಿದ್ದಾಗ ಆಯಿಷಾಳೇ ತನ್ನಲ್ಲಿದ್ದ ಚಿನ್ನವನ್ನು ಮಾರಾಟ ಮಾಡಿ ಗಂಡನ ಕೈಗಿತ್ತಿದ್ದಳು. ಯಾರ ಚಿನ್ನಾಭರಣದಿಂದ ಸೌದಿಗೆ ತೆರಳಿದ್ದನೋ ಜುಬೇರ್ ದಿನಗಳೆದಂತೆ ಆಕೆಯನ್ನೆ ಮರೆಯತೊಡಗಿದ. ತಂದೆ-ತಾಯಿಯ ಒತ್ತಾಯಕ್ಕೆ ನಿಧಾನವಾಗಿ ಪ್ರತಿಕ್ರಿಯೆ ನೀಡತೊಡಗಿದ್ದ. ಬಾಡಿಗೆ ಮನೆಯಲ್ಲಿ ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದ ಆಯೆಷಾಳಿಗೆ ಜೀವನ ನಿರ್ವಹಿಸುವುದೆ ಕಷ್ಟವಾಗಿತ್ತು. ಈ ಸಂದರ್ಭ ಪ್ರೀತಿಸಿ ಮದುವೆಯಾಗಬಾರದಿತ್ತು ಎನ್ನುವ ಸತ್ಯಾಂಶ ಅರಿವಾಗ ತೊಡಗಿತ್ತು. ಆದರೆ ರೈಲು ಹೋದ ಮೇಲೆ ಟಿಕೇಟ್ ಕೊಂಡಂತ ಪರಿಸ್ಥಿತಿ ಪುತ್ತೋಳಿಯದು.
ಮುಸ್ಲಿಂ ಯುವಕನ ಪ್ರೀತಿಗೆ ಬಲಿಯಾಗಿ ತನ್ನ ಹುಟ್ಟೂರು, ಧರ್ಮ, ತಂದೆ ತಾಯಿ, ಕುಟುಂಬವನ್ನು ತೊರೆದು ಬಂದಿದ್ದ ಆಕೆಗೆ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ದಿನದ ತುತ್ತು ತಿನ್ನಿಸುವುದೂ ಕಷ್ಟವಾಗತೊಡಗಿತು. ಇತ್ತ ಸೌದಿಗೆ ತೆರಳಿದ ಗಂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಗಂಡನ ಮನೆಯ ಬಳಿ ಹೋದರೆ ಗೇಟಿನ ಒಳಗೆ ಪ್ರವೇಶವಿರಲಿಲ್ಲ. ಅಕ್ಷರಶಃ ಬೀದಿಪಾಲಾದ ಆಯಿಶಾ ಇಬ್ಬರು ಮಕ್ಕಳೊಂದಿಗೆ ಹೇಗಾದರೂ ಬದುಕಬೇಕು ಎಂದು ಹಠಕ್ಕೆ ಬಿದ್ದಿದ್ದಳು.
ನಂತರ ಸೌದಿಯಿಂದ ಹಿಂತಿರುಗಿದ ಜುಬೇರ್‌ಗೆ ತಂದೆ ಮರಣ ಹೊಂದಿದಾಗ ಆತ ನಡೆಸುತ್ತಿದ್ದ ಬೀಡಿ ಬ್ರಾಂಚ್ ಮುನ್ನಡೆಸುವ ಘನತರ ಜವಾಬ್ದಾರಿ ದೊರೆಯಿತು. ಈಸಂದರ್ಭ ಮತ್ತೆ ಆಯೆಷಾ, ಜುಬೇರ್ ಒಂದಾದರು. ಜುಬೇರ್‌ಗೆ ಗಲ್ಫ್‌ನಲ್ಲಿ ಪಾಕಿಸ್ತಾನದ ವ್ಯಕ್ತಿಯಿಂದ ಭಯೋತ್ಪಾದನೆಗೆ ಇಂಬು ನೀಡುವ ಸಂಪರ್ಕ ದೊರಕಿತ್ತು. ಇದನ್ನು ಮುಗ್ದೆ ಆಯೇಷಾಳ ಮೇಲೆ ಜುಬೇರ್ ಪ್ರಯೋಗಿಸಿದ್ದ. ಶ್ರೀಮಂತಿಕೆ ಸೋಗಿಗೆ ಬಲಿಯಾದ ಆಯೇಷಾ ಕಾಲಕ್ರಮೇಣ ಗಂಡನ ಚಟುವಟಿಕೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದಳು. ಇದಕ್ಕೆ ಪುಷ್ಟಿ ನೀಡುವ ಹಲವಾರು ಘಟನೆಗಳು ಸಾಕ್ಷಿಯಾಗಿದೆ.
ನರೇಂದ್ರ ಮೋದಿಯ ಹೂಂಕಾರ್ ರ್‍ಯಾಲಿಯಲ್ಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಜಾಡನ್ನು ಹಿಡಿದು ಮಂಗಳೂರಿನವರೆಗೆ ಆಗಮಿಸಿದ್ದರು. ಬಾಂಬ್ ಸ್ಪೋಟವಾದ ಸಂದರ್ಭದಲ್ಲಿಯೇ ಜುಬೇರ್ ಬೇರೆ ಹೆಸರಿನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ, ಮಂಗಳೂರಿನಿಂದ ಪರಾರಿಯಾಗಲು ಬಯಸಿದ್ದ. ಇದನ್ನು ತನಿಖೆಯ ವೇಳೆ ಇಲ್ಲವೆಂದು ವಾದಿಸಿದ್ದರೂ, ಕೆಲವೊಂದು ಸಂಶಯಗಳಿಗೆ ಕಾರಣವಾಗುತ್ತಿದೆ. ಜುಬೇರ್ ಒಂದು ಪಾಸ್‌ಪೋರ್ಟ್ ಇದ್ದರೂ, ಮತ್ತೊಂದು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪಾಕಿಸ್ಥಾನಕ್ಕೆ ತೆರಳಲು ಯೋಜನೆ ರೂಪಿಸುತ್ತಿದ್ದ. ಜುಬೇರ್ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿರುವ ದಾಖಲೆಗಳು ಇದನ್ನು ಪುಷ್ಟೀಕರಿಸಿವೆ. ಹೆಸರು ಬದಲಿಸಿಕೊಂಡು ಪಾಸ್‌ಪೋರ್ಟ್‌ಗಾಗಿ ಸಲ್ಲಿಸಿದ ಅರ್ಜಿಯ ನಕಲು ಪ್ರತಿಗಳು ಸಾಕ್ಷ್ಯ ಒದಗಿಸಿವೆ. ಜುಬೇರ್ ಹುಸೇನ್ ಎನ್ನುವ ಹೆಸರಿನಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದ. ಹೆಸರು ಬದಲಾವಣೆಯ ಕುರಿತಂತೆ ಪತ್ರಿಕಾ ಜಾಹಿರಾತನ್ನು ಕೂಡ ಆತ ನೀಡಿದ್ದ. ಪೊಲೀಸರು ಜುಬೇರ್ ಮನೆ ಪರಿಶೀಲನೆಗಾಗಿ ದಾಳಿ ನಡೆಸಿದಾಗ ಅಲ್ಲಿ  ಹಲವು ದಾಖಲೆಗಳು ಸೇರಿದಂತೆ, ಎರಡನೇ ಪಾಸ್ ಪೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯ ಜೆರಾಕ್ಸ್ ಪ್ರತಿ ಲಭಿಸಿತ್ತು. ಹೆಸರು ಬದಲಾಯಿಸಿರುವ ಅಫಿಡವಿಟ್ ಮತ್ತು ಹೆಸರು ಬದಲಾಯಿಸಿದ್ದೇನೆ ಎಂದು ಪತ್ರಿಕಾ ಜಾಹಿರಾತು ಪೋಲಿಸರ ಕೈವಶವಾಗಿದೆ. ಆತ ಮೊದಲ ಪಾಸ್‌ಪೋರ್ಟ್ ಮಾಡಿದ್ದು ೧೯೯೧ರಲ್ಲಿ. ನಂತರ ೧೯೯೫ರಲ್ಲಿ ಸೌದಿಗೆ ತೆರಳಿದಾತ ೨೦೦೨ಕ್ಕೆ ಮತ್ತೆ ಭಾರತಕ್ಕೆ ಹಿಂತಿರುಗಿದ್ದು, ಪುನಃ ವಿದೇಶಕ್ಕೆ ಹೋಗಿರಲಿಲ್ಲ. ಅಲ್ಲದೆ ಆ ಬಳಿಕ ಅದೇ ಪಾಸ್ ಪೋರ್ಟ್‌ನ್ನು ಮರು ನವೀಕರಣ ಮಾಡಬಹುದಾಗಿತ್ತು. ತಕ್ಷಣ ಬೇರೆ ಹೆಸರಿನಲ್ಲಿ ಹೊಸ ಪಾಸ್ ಪೋರ್ಟ್ ಮಾಡಿ ಒಂದೇ ತಿಂಗಳೊಳಗೆ ಪಾಕಿಸ್ಥಾನಕ್ಕೆ ತೆರಳಲು ನಿರ್ಧರಿಸಿದ್ದ.  ಇಲ್ಲವಾದರೆ ಆತ ಅಚಾನಕ್ ಪಾಸ್ಪೋರ್ಟ್ ಮಾಡಲು ನಿರ್ಧರಿಸುತ್ತಿರಲಿಲ್ಲ ಎಂದು ಪೋಲಿಸರು ಅನುಮಾನ ವ್ಯಕ್ತಪಡಿಸಿದ್ದರು. ಮಹಮ್ಮದ್ ಜುಬೇರ್ ತನ್ನ ಎರಡನೇ ಹೆಸರಾದ ಜುಬೇರ್ ಹುಸೈನ್ ಎಂಬ ಹೆಸರಿನಲ್ಲಿ ಪಾಸ್‌ಪೋರ್ಟ್ ಮಾಡಲು ಸ್ಕೆಚ್ ಹಾಕಿದ್ದ. ತನ್ನ ಪತ್ನಿ ಆಯಿಶಾ ವಾಸ ಹೂಡಿರುವ ಪಂಜಿಮೊಗರು ಮಂಜೊಟ್ಟಿಯ ಮನೆ ವಿಳಾಸವನ್ನಿಟ್ಟು, ೨ ನೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಇಬ್ಬರು ಆರೋಪಿಗಳನ್ನು ಬಿಹಾರ್ ಪೋಲಿಸರು ಬಿಹಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸಲಿದ್ದಾರೆ. ಆಯಿಷಾ ಕಾಸರಗೋಡಿನಲ್ಲಿ ಹವಾಲ ಹಣ ವಿತರಿಸಿದ್ದಾಳೆ ಎನ್ನುವ ಗುಮಾನಿ ವ್ಯಕ್ತವಾಗಿದೆ.
ಆಯೇಷಾ-ಜುಬೇರ್‌ಗೆ ಟ್ರಾನ್ಸಿಸ್ಟ್  ವಾರಂಟ್:
ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಉಗ್ರರ ಚಟುವಟಿಕೆಗಳಿಗೆ ಹವಾಲಾ ಹಣವನ್ನು ಪೂರೈಸುತ್ತಿದ್ದರು ಎಂಬ ಆರೋಪದಡಿ ಬಂಧಿತರಾಗಿರುವ ಆಯೇಷಾ ಬಾನು(೪೦) ಹಾಗೂ ಆಕೆಯ ಪತಿ ಜುಬೇರ್‌ಗೆ, ಟ್ರಾನ್ಸಿಸ್ಟ್ ವಾರಂಟ್ ನೀಡುವ ಮೂಲಕ ಬಿಹಾರ ಪೊಲೀಸರಿಗೆ ಒಪ್ಪಿಸಿದರು. ಈ ಘಟನೆಯಿಂದ ಇಡೀ ದೇಶದ ಚಿತ್ತ ಈಗ ಮಂಗಳೂರಿನತ್ತ ನೆಟ್ಟಿದೆ. ಇದಕ್ಕೆ ಕಾರಣವಾದ ಆಯೇಷಾ ಪ್ರಕರಣ ಮಂಗಳೂರು ಮಾತ್ರವಲ್ಲ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಜೊತೆಗೆ ಮಂಗಳೂರು ಉಗ್ರರ ತಾಣವಾಗುತ್ತಿದೆ ಎಂಬುದನ್ನೂ ಪುಷ್ಠೀಕರಿಸಿದೆ. ಈ ಹಿಂದೆ ಯಾಸಿನ್ ಭಟ್ಕಳ್ ಬಂಧನವಾದ ಬಳಿಕ ಆತ ಮಂಗಳೂರಿನ ಅತ್ತಾವರದಲ್ಲಿ ಉಳಿದುಕೊಂಡಿದ್ದ ಫ್ಲಾಟ್‌ನ್ನು ಪತ್ತೆಹಚ್ಚಲಾಗಿತ್ತು. ಇಲ್ಲಿಂದ ಬಾಂಬ್ ತಯಾರಿಕೆಯ ಹಲವು ಸ್ಪೋಟಕಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಯಾಸಿನ್ ಮಂಗಳೂರನ್ನೇ ತನ್ನ ಪ್ರಮುಖ ಅಡಗುದಾಣವನ್ನಾಗಿಸಿಕೊಂಡಿದ್ದಲ್ಲದೆ ಇಲ್ಲಿಂದಲೇ ಬಾಂಬ್ ತಯಾರಿಸಿ ಸರಬರಾಜು ಮಾಡುತ್ತಿದ್ದ ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿತ್ತು. ಈಗ ಭಯೋತ್ಪಾದನೆಗೆ ಸಂಬಂಧಿಸಿಯೇ ಮಂಗಳೂರು ಮತ್ತೆ ಸುದ್ದಿಯಲ್ಲಿದೆ. ಜೊತೆಗೆ ಲವ್ ಜಿಹಾದ್‌ನ ಕರಾಳತೆಯ ಅರಿವೂ ಆಗುತ್ತಿದೆ.
ಆಯೇಷಾ ಖಾತೆಯಿಂದ ರೂ.೫ ಕೋಟಿ ವಿಲೇವಾರಿ:
ವಿವಿಧ ಬ್ಯಾಂಕಿನ ೩೫ ಖಾತೆಗಳ ಮೂಲಕ ಹವಾಲಾ ಹಣದ ವಿಲೇವಾರಿ ಮಾಡುತ್ತಿದ್ದ ಆಯೇಷಾ ಈಗ ಪೊಲೀಸರ ಅತಿಥಿ. ಆಯೇಷಾ ಮಂಗಳೂರಿನ ಹಂಪನಕಟ್ಟೆಯ ಖಾಸಗಿ ಬ್ಯಾಂಕ್ ಒಂದರಿಂದಲೇ ಐದು ಕೋಟಿಗೂ ಮಿಕ್ಕಿ ಆಯೇಷಾ ಹಣ ವಿಲೇವಾರಿ ಮಾಡಿರುವ ಸಾಧ್ಯತೆ ದಟ್ಟವಾಗಿದೆ. ಇಷ್ಟು ದೊಡ್ಡ ಮೊತ್ತ ಯಾಕಾಗಿ ರವಾನೆಯಾಯಿತು ಎಂಬ ಕುರಿತು ತನಿಖೆ ನಡೆಯುತ್ತಿದೆ. ಉತ್ತರ ಭಾರತದಲ್ಲಿ ಬಂಧಿತರಾದ ನಾಲ್ವರಿಗೆ ಆಯೇಷಾಳ ಖಾತೆಯಿಂದಲೇ ಹಣ ರವಾನೆಯಾಗಿರುವುದು ಸ್ಪಷ್ಟವಾಗಿದ್ದು, ಈ ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ. ಹವಾಲಾ ಮೂಲಕ ಬಂದ ಹಣ ಯಾರ್‍ಯಾರ ಕೈಸೇರುತ್ತಿತ್ತು? ಈ ಪ್ರಕರಣದ ಹಿಂದೆ ಇನ್ನೆಷ್ಟು ಕರಾಳ ಮುಖಗಳಿವೆ ಎಂಬುದು ಸಮಗ್ರ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ ಎನ್ನುವುದು ಬಿಹಾರ ಪೊಲೀಸರ ಅಭಿಪ್ರಾಯ. ಆಯೇಷಾ ಹೊಂದಿದ್ದ ಮಂಗಳೂರಿನ ಬ್ಯಾಂಕ್‌ನ ಒಂದರ ಖಾತೆಯನ್ನು (ಸಂಖ್ಯೆ ೦೦೧೪೦೫೫೦೦೦೮೬) ಜುಬೇರ್ ಸ್ವತಃ ನಿರ್ವಹಿಸುತ್ತಿದ್ದ. ಈತನೆ  ಬೇರೆ ಬೇರೆ ಕಡೆ ಹಣ ರವಾನಿಸಿರುವ ಸಾಧ್ಯತೆಯಿದೆ ಎಂದು ಬಿಹಾರದ ಲಕ್ಕಿಸ್‌ರಾಯಿ ಪೊಲೀಸ್ ಠಾಣೆ ಎಸ್‌ಐ ರಾಜ್ ಕಿಶೋರ್ ಸಿಂಗ್ ಮಾಹಿತಿ ನೀಡಿದ್ದಾರೆ. ಒಂದೇ ಖಾತೆಗೆ ನಾಲ್ವರು ಹಣ ಹಾಕುತ್ತಿದ್ದುದರ ಬಗ್ಗೆ ಅನುಮಾನಗೊಂಡು ಸಂತೋಷ್ ಕುಮಾರ್ ಎಂಬ ಪೊಲೀಸ್ ಅಧಿಕಾರಿ ಗೋಪಾಲ್ ಕುಮಾರ್, ಗಣೇಶ್ ಪ್ರಸಾದ್, ಪವನ್ ಕುಮಾರ್ ಮತ್ತು ವಿಕಾಸ್ ಕುಮಾರ್ ಎಂಬವರನ್ನು ಬಂಧಿಸಿದ್ದರು ಈ ವೇಳೆ ಅವರು ಆಯೇಷಾಳ ಹೆಸರು ತಿಳಿಸಿದ್ದರು ಎಂದು ಸಿಂಗ್ ತಿಳಿಸಿದ್ದಾರೆ. ಲಕ್ಕಿಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ ೪೨೦, ೪೬೭, ೪೬೮, ೪೭೧, ಕಾನೂನುಬಾಹಿರ ಚಟುವಟಿಕೆಗೆ ಸಂಬಂಧಿಸಿದಂತೆ ಯುಎಪಿಎ ಸೆಕ್ಷನ್ ೧೭, ೧೮, ೧೮ ಬಿ, ೨೮, ೩೮ ಅನ್ವಯ ಕೇಸು ದಾಖಲಾಗಿದೆ.
ಆಯೇಷಾ ಜಾಣೆ: ಅತ್ಯಂತ ಜಾಣ್ಮೆಯಿಂದಲೇ ಆಯೇಷಾ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿದ್ದಳು. ಐದು ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳನ್ನು ಹೊಂದಿದ್ದ ಈಕೆ ಯಾರಿಗೂ ಅನುಮಾನ ಬಾರದಿರಲಿ ಎಂದು ಒಮ್ಮೆ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಳು ಎನ್ನಲಾಗಿದೆ.
ಜುಬೇರ್ ಸೂತ್ರಧಾರ ! ಆಶಾ ಆಗಿದ್ದ ವಿರಾಜಪೇಟೆಯ ಆಯೇಷಾ ಜುಬೇರ್‌ನನ್ನು ಮದುವೆಯಾದ ಬಳಿಕ ಆಯೇಷಾ ಆಗಿದ್ದಾಳೆ. ಪತ್ನಿಯನ್ನು ಮುಂದಿಟ್ಟು ತನ್ನ ಹವಾಲ ಹಣದ ರುಚಿ ಕಂಡಿದ್ದ ಜುಬೇರ್ ಪತ್ನಿಯನ್ನು ಮುಂದಿಟ್ಟುಕ್ಕೊಂಡೇ ತನ್ನ ಪಾಪೀ ಕೃತ್ಯ ಎಸಗಿರುವ ಸಾಧ್ಯತೆಯಿದೆ. ತನ್ನ ಪಾಪಿ ಕೃತ್ಯಕ್ಕಾಗಿಯೇ ಜುಬೇರ್ ಪ್ರೀತಿಯ ನಾಟಕವಾಡಿದನೇ?(ಲವ್ ಜಿಹಾದ್)ಎಂಬ ಕುರಿತೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆಯೇಷಾ ಸೇರಿದಂತೆ ಜುಬೇರ್‌ನ ಸಮಗ್ರ ವಿಚಾರಣೆಯಾದರೆ ಇನ್ನೆಷ್ಟು ಮಂದಿ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾರೆ? ಪ್ರೀತಿಯ ನಾಟಕಕ್ಕೆ ಬಲಿಯಾದ ಹಿಂದೂ ಯುವತಿಯರೆಷ್ಟು?ಎನ್ನುವ ಅಂಶಗಳು ಬೆಳಕಿಗೆ ಬರಲಿವೆ.
ರಾಜ್ಯದ ಎಲ್ಲಾ ಭಾಗದಲ್ಲಿಯೂ ಮುಸ್ಲಿಂ ಯುವಕರು ಹಿಂದು ಹೆಣ್ಣುಮಕ್ಕಳನ್ನು ಪ್ರೀತಿಸುವ ನಾಟಕವಾಡಿ ಅವರನ್ನು ಮದುವೆಯಾಗಿ ಭಯೋತ್ಪಾದನೆ, ಸೆಕ್ಸ್ ಮಾಫಿಯಾಗಳಿಗೆ ಬಲಿ ನೀಡುತ್ತಾರೆ ಎನ್ನುವ ಮಾತುಗಳು ಹಿಂದು ಹೆಣ್ಣುಮಕ್ಕಳಿಗೆ ಅರ್ಥವಾಗುತ್ತಿಲ್ಲ. ಜಗತ್ತಿನಲ್ಲಿ ಪ್ರೀತಿ ಮಾಡುವುದು ತಪ್ಪಲ್ಲ. ತಾನು ಪ್ರೀತಿಸಿದ ಯುವಕನಿಗಾಗಿ ತನ್ನ ಹೆತ್ತವರನ್ನೇ ದೂರಮಾಡುವ ಪ್ರೀತಿಯಿಂದ ಸಾಧಿಸುವುದಾದರೂ ಏನು? ತಂದೆ ಕಷ್ಟಪಟ್ಟು ದುಡಿದು ವಿದ್ಯಾಭ್ಯಾಸ ಕೊಡಿಸುತ್ತಾರೆ. ತನ್ನ ರಕ್ತವನ್ನೆ ಬಸಿದು, ಎದೆಹಾಲನ್ನಾಗಿ ತಾಯಿ ಉಣಬಡಿಸಿರುವುದನ್ನು ಮರೆತು ಪ್ರೀತಿಯ ಮೋಹಕ್ಕೆ ಬಲಿಯಾಗಿ ಓಡಿ ಹೋಗುತ್ತಾರೆ. ಇಂತಹ ಹೆಣ್ಣುಮಕ್ಕಳು ಅನೇಕರು ಸೆಕ್ಸ್‌ಮಾಫಿಯಾಗಳಿಗೆ, ಭಯೋತ್ಪಾದನೆಗೆ ಬಲಿಯಾಗುತ್ತಿದ್ದಾರೆ. ನಿಜವಾದ ಪ್ರೀತಿಯಾಗಿದ್ದರೆ ಆಕೆಗೆ ಅವರ ಮನೆಯಲ್ಲಿ ಉನ್ನತ ಸ್ಥಾನ ಸಿಗಬೇಕಿತ್ತು. ಆದರೆ ಅವರಿಗೆ ಎರಡು ಕಡೆಯಿಂದಲೂ ತಿರಸ್ಕಾರ. ಕೇವಲ ಮನೆಗಳಿಂದ ಮಾತ್ರವಲ್ಲ. ಎರಡೂ ಧರ್ಮಗಳಿಂದ ತಿರಸ್ಕಾರದ ನಡುವೆ ಇವರ ದಾಂಪತ್ಯದ ಹೆಣಗಾಟ ಮಾಡಬೇಕಾಗುತ್ತದೆ. ಮುಸ್ಲಿಂ ಯುವಕರನ್ನು ಪ್ರೀತಿಸಿ ಮದುವೆಯಾದ ಹೆಣ್ಣುಮಕ್ಕಳು ಅವರ ಮನೆಯನ್ನು ಬೆಳಗುವ ಜ್ಯೋತಿಯಾಗದೆ, ಕೇವಲ ಜೆರ್ಸಿ ದನದಂತೆ ವರ್ಷದಿಂದ ವರ್ಷಕ್ಕೆ ಮಕ್ಕಳನ್ನು ಹಡೆಯುವ ಯಂತ್ರವಾಗಿ ಮಾರ್ಪಡಾಗುತ್ತಿದ್ದಾಳೆ ಎನ್ನುವುದು ಘನಘೋರ ಸತ್ಯ. ಹಿಂದು ಧರ್ಮದಲ್ಲಿ ಸ್ವಚ್ಚಂದವಾಗಿ ಹಾರಾಡುತ್ತಿದ್ದ ಹೆಣ್ಣಮಗಳು ಲವ್‌ಜಿಹಾದ್‌ಗೆ ತುತ್ತಾಗಿ ಬುರ್ಖಾದೊಳಗೆ ತನ್ನ ಸೌಂದರ್ಯವನ್ನು ಮರೆಮಾಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವ ಸತ್ಯವನ್ನು ಅರಿಯಿರಿ..ಪೋಷಕರ ಮರ್ಯಾದೆ ಉಳಿಸುವುದರೊಂದಿಗೆ ಆಯೆಷಾಳಂತೆ ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ನೀಡುವ ದಾಳವಾಗದಂತೆ ಎಚ್ಚರಿಕೆ ವಹಿಸಿಕೊಳ್ಳಿ..ಏನಂತಿರಾ.


No comments:

Post a Comment