Thursday 30 January 2014

ಆರೋಪಿ ಹಿಂದುವಾದರೆ ಬೊಬ್ಬೆ-ಇಲ್ಲವಾದರೆ ಮೌನ...!
 ಯಾಕೀ ತಾರತಮ್ಯ..ಎದ್ದೇಳಿ ಸೋ-ಕಾಲ್ಡ್ ಜರ್ನಲಿಸ್ಟ್‌ಗಳೆ? ಕಮ್ಯೂನಿಸ್ಟ್‌ಗಳೆ? ವಿಚಾರವಾದಿಗಳೇ?
(ಕರಾವಳಿಯ ಎರಡು ಪ್ರತಿಷ್ಠಿತ ವೈದ್ಯಕೀಯ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಸೂಕ್ಷ್ಮ ಅವಲೋಕನದ ಈ ಲೇಖನ-ಪ್ರಸ್ತುತ ಜನತೆಯ ನಡೆ)
ಸೂರ್ಯನಿಂದ ಗುರುತಿಸಲಾಗದ ವಸ್ತುವನ್ನು ಇರುಳಿನಲ್ಲಿ ದೀಪವು ಬೆಳಗಿ ಅದರ ಇರವನ್ನು ತೋರ್ಪಡಿಸುತ್ತದೆ. ಇದರರ್ಥ ಸೂರ್ಯನಿಗಿಂತ ದೀಪವೇ ಶ್ರೇಷ್ಠವೆಂದಲ್ಲ. ಸಮಾಜದಲ್ಲಿ ವಿವೇಕಯುತ-ಉತ್ತಮ ಸೌಹಾರ್ದ ಬದುಕಿಗೆ ಅಗತ್ಯವಿರುವ ಅಂಶವನ್ನು ಹಿರಿಯರು-ಕಿರಿಯರು ಎನ್ನುವ ಭೇದವಿಲ್ಲದೇ ಸ್ವೀಕರಿಸಬೇಕು ಎನ್ನುವ ನಾಣ್ಣುಡಿ ಜನಜನಿತವಾಗಿದೆ. ವೈಜ್ಞಾನಿಕತೆಯ ಸೋಗಿನಲ್ಲಿ ಯಾರಿಂದ ಯಾವ ಅಂಶವನ್ನು ಸ್ವೀಕರಿಸಬೇಕು ಎನ್ನುವ ಸಮಸ್ಯೆಯಲ್ಲಿ ಹಿಂದು ಸಮಾಜ ತೊಳಲಾಡುತ್ತಿದೆಯೇ? ಎನ್ನುವ ಗೊಂದಲದ ತಕ್ಕಡಿಯಲ್ಲಿದೆ. ಕಾರಣವಿಷ್ಟೆ ಕೆಲವು ದಿನದ ಹಿಂದೆ ಮಂಗಳೂರಿನ ದೇರಳಕಟ್ಟೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ದೌರ್ಜನ್ಯದಿಂದ ನಾವು ತಾಲಿಬಾನ್‌ನಲ್ಲಿದ್ದೆವೊ ಅಥವಾ ಮಾನವೀಯ ಮೌಲ್ಯಗಳ ಪ್ರತೀಕ ಭಾರತದಲ್ಲಿದ್ದೆವೊ ಎನ್ನುವ ಸಂಶಯ ತಾಂಡವವಾಡುತ್ತಿದೆ. ದಿನನಿತ್ಯ, ಪ್ರತಿಕ್ಷಣವೂ ಭಯದ ವಾತಾವರಣದಲ್ಲಿ ಹೇಡಿಗಳಂತೆ ಜೀವನ ನಡೆಸುವಂತ ಸ್ಥಿತಿ ಬಹುಸಂಖ್ಯಾತ ಹಿಂದುಗಳಾದಾಯಿತೆ?
ತಾಲಿಬಾನ್ ಸಂಸ್ಕೃತಿಯಲ್ಲಿ, ಭಯೋತ್ಪಾದಕರೂ ಅಸಹಾಯಕ ಮಹಿಳೆಯ ಮೇಲೆ ಅತ್ಯಾಚಾರಗೈದಿಲ್ಲವೆಂದಲ್ಲ. ಅಲ್ಲಿ ಹಲವು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೂ, ಅವೆಲ್ಲವೂ ಕೊಲೆಯಲ್ಲಿ ಅಂತ್ಯವಾಗಿದೆ. ಆದರೆ ದೇರಳಕಟ್ಟೆಯ ಪ್ರಕರಣ ಮಾತ್ರ ವಿಭಿನ್ನ. ಭಾರತೀಯ ಸಂಸ್ಕೃತಿಯಲ್ಲಿ ಪರಮೋಚ್ಛ ಸ್ಥಾನವನ್ನಲಂಕರಿಸಿರುವ ವಿರುದ್ದ ಲಿಂಗಿಗಳ ಮನಸ್ಸು, ದೇಹಗಳು ಒಂದಾಗುವ ಲೈಂಗಿಕ ಕ್ರಿಯೆ, ನಾಲ್ಕು ಗೋಡೆಗಳ ಮಧ್ಯೆ ನಡೆಯ ಬೇಕಾಗಿರುವುದನ್ನು ಪಾಶ್ಚಾತ್ಯರಲ್ಲೂ ಕಂಡುಬರದಂತೆ ಎಂಟು ಮಂದಿ ಆರೋಪಿಗಳ ಸಮ್ಮುಖದಲ್ಲಿ ನಡೆಸಲು ಆಗ್ರಹಿಸುತ್ತಾರೆ ಎಂದಾಗ ಆರೋಪಿಗಳು ಆ ವಿದ್ಯಾರ್ಥಿನಿಯೊಂದಿಗೆ ಎಷ್ಟು ವಿಕೃತವಾಗಿ ವರ್ತಿಸಿರಬಹುದು ಎನ್ನುವ ದೃಶ್ಯವೇ ಕಲ್ಪನೆಗೆ ನಿಲುಕದಿರುವಾಗ ವಿದ್ಯಾರ್ಥಿನಿಯ ಪರಿಸ್ಥಿತಿ ಹೇಗಿರಬೇಡ ಎನ್ನುವುದನ್ನು ಪ್ರತಿಯೊರ್ವನು ಆಲೋಚಿಸಬೇಕು. ಕಾರಣ ಪ್ರತಿಯೊರ್ವನು ತಾಯಿಯ ಗರ್ಭದಿಂದ ಭೂಮಿಗಿಳಿದವರಾಗಿರುವ ಕಾರಣ, ತಾಯಿ, ಅಕ್ಕ-ತಂಗಿ, ಹೆಂಡತಿಯನ್ನು ಹೊಂದಿರುವ ಪ್ರತಿಯೊರ್ವನೂ ಸಂತ್ರಸ್ತೆಯ ಸ್ಥಾನದಲ್ಲಿ ತಮ್ಮ ಬಂಧುಗಳನ್ನು ಕಲ್ಪಿಸಿಕೊಂಡಾಗ ಪರಿಸ್ಥಿತಿಯ ಗಂಬೀರತೆ ಅರ್ಥವಾಗುತ್ತದೆ ಎನ್ನುವ ಭಾವನೆ ನನ್ನದು. ಲೈಂಗಿಕ ದೃಶ್ಯವನ್ನು ಚಿತ್ರಿಸಿಕೊಂಡು ಹಣದ ಬೇಡಿಕೆಯಿಡುವಂತಹ ಭಂಡ ಧೈರ್ಯ ಮಾಡಿ, ಸಮಾಜದಲ್ಲಿ ವಿದ್ರೋಹಿ ಚಟುವಟಿಕೆ ನಡೆಸುವವರಿಗೂ ನಾವು ನಿಮ್ಮಂತೆ ಸರಿಸಮಾನರು ಎನ್ನುವ ಪರೋಕ್ಷ ಸಂದೇಶ ಸಾರುವ ಆರೋಪಿಗಳ ಮನಸ್ಥಿತಿಯ ಕುರಿತು ಸಂಶಯ ಹುಟ್ಟುತ್ತದೆ. ಹೀನಕೃತ್ಯವನ್ನೆಸಗುವ ತಾಲಿಬಾನಿಗಳು ಕೂಡ ಹುಬ್ಬೇರಿಸುವಂತ ಘಟನೆ ಕರಾವಳಿಯಲ್ಲಿ ವರದಿಯಾಗಿದೆ ಎಂದಾಗ ನಮ್ಮ ಪರಿಸ್ಥಿತಿಯ ಕುರಿತು ಆತ್ಮಾವಲೋಕನ ಅಗತ್ಯವಿದೆ ಎಂದೆನಿಸುವುದರಲ್ಲಿ ತಪ್ಪಿಲ್ಲವಲ್ಲ? ಅತ್ಯಾಚಾರಕ್ಕೊಳಗಾಗಿ ದೈಹಿಕ-ಮಾನಸಿಕವಾಗಿ ಜರ್ಜರಿತಳಾದ ಹುಡುಗಿಯಲ್ಲಿ ೫೦ಲಕ್ಷ ರೂ.ಬೇಡಿಕೆಯಿಟ್ಟು, ಅದನ್ನು ತರಲು ಧೈರ್ಯದಿಂದ ಆಕೆಯನ್ನು ಬಿಟ್ಟಿದ್ದಾರೆ ಎನ್ನುವಾಗ ಮುಸಲ್ಮಾನರಿಗೆ ಪೂರಕವಾಗಿರುವ ಸರಕಾರವೆನ್ನುವ ಅಂಶ ತಿಳಿಯುವುದಿಲ್ಲವೇ? ಕೆಲವು ಮತಾಂಧ ಮುಸಲ್ಮಾನರ ಪರವಾಗಿದ್ದು ಅವರು ಮಾಡಿದ್ದೆಲ್ಲವೂ ಸರಿಯೆನ್ನುವ ಲಜ್ಜೆಗೇಡಿತನದ ಸರಕಾರದಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಎನ್ನುವ ಅನುಮಾನ ಕಾಡುತ್ತದೆ.
ಕಳೆದ ಏಳೆಂಟು ವರ್ಷಗಳಲ್ಲಿ ಕರಾವಳಿಯಲ್ಲಿ ೩೦೦೦ಕ್ಕೂ ಅಧಿಕ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ ಎನ್ನುವುದನ್ನು ದಾಖಲೆ ತಿಳಿಸುತ್ತದೆ. ಕಲ್ಪನೆಗೂ ಮೀರಿದ, ಊಹೆಗೂ ನಿಲುಕದಷ್ಟು ಎತ್ತರವಾದ ಭಯೋತ್ಪಾದನಾ ಕೃತ್ಯಗಳಿಲ್ಲಿ ವರದಿಯಾಗಿವೆ. ಆದರೆ ತಾಲಿಬಾನ್‌ನಲ್ಲಿ ನಡೆಯುವ ಘಟನೆಗಿಂತಲೂ ಕೀಳುಮಟ್ಟದ ಮೃಗೀಯ ವರ್ತನೆಯ ಅತ್ಯಾಚಾರವನ್ನು ಪೊಲೀಸರು ಮುಚ್ಚಿಡಲು ಪ್ರಯತ್ನಿಸುತ್ತಿರುವುದಾದರೂ ಯಾಕೆ? ಆರೋಪಿಗಳನ್ನು ಹಿಡಿದು ಹೆಸರು ಪ್ರಕಟ ಪಡಿಸದೆ, ಮಾಧ್ಯಮಕ್ಕೆ ತಿಳಿಯಿತು ಎನ್ನುವ ನೆಲೆಯಲ್ಲಿ ಹೆಸರನ್ನು ಪ್ರಕಟ ಪಡಿಸಿದ ಹಿಂದಿರುವ ದುರುದ್ದೇಶವಾದರೂ ಎಂತದ್ದು? ಎನ್ನುವ ಪ್ರಶ್ನೆಗಳು ಸಹಜ. ಆದರೆ ಸರಕಾರ-ಪೊಲೀಸ್ ಇಲಾಖೆಯ ಗೌಪ್ಯ ನಡೆಯಿಂದ ಹಿಂದೂ ಸಮಾಜ ಬಹುದಿನಗಳಿಂದ ಮತಾಂತರ, ಲವ್‌ಜಿಹಾದ್, ಹೆಣ್ಣು ಮಕ್ಕಳ ರಕ್ಷಣೆ, ಗೋರಕ್ಷಣೆಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದರೂ ಪ್ರಸ್ತುತ ಆತಂಕವನ್ನೆದುರಿಸುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ತಾನು ಹಿಂದು ವಿರೋಧಿ ಎನ್ನುವ ನೆಲೆಯಲ್ಲಿ ಹಲವಾರು ಯೋಜನೆ ಜಾರಿಗೆ ತಂದಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಮೂಢ ನಂಬಿಕೆ ಹೆಸರಿನಲ್ಲಿ ಹಿಂದೂ ಧಾರ್ಮಿಕ ಶ್ರದ್ಧ್ಧೆಗೆ ಕೊಡಲಿಯೇಟು ನೀಡಿದ್ದು, ರಾಜ್ಯದಲ್ಲಿ ೮ ವರ್ಷದ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಕರೆದು ಮಾನ-ಸಮ್ಮಾನ, ವೇದಿಕೆಗಳನ್ನು ನೀಡಿದ `ಬೆನ್ನಿಹಿನ್' ಗೆ ಪುನಃ ಸ್ವಾಗತ ಬಯಸಿದ್ದು ಇದಕ್ಕೆಲ್ಲಾ ಪೂರಕವೆಂಬಂತಿದೆ. ಅಲ್ಪಸಂಖ್ಯಾತರಿಗೆ ಶಾದಿಭಾಗ್ಯ, ಅವರಿಗೆ ವಿಶೇಷ ಕೋರ್ಟ್ ರಚನೆ ಮಾಡಬೇಕು ಎನ್ನುವ ಕುತ್ಸಿತ ಮನಸ್ಸು ರಾಜ್ಯಸರಕಾರದ್ದಾಗಿದೆ. ಈ ಓಲೈಕೆಯ ರಾಜಕಾರಣ, ಸಾಮಾಜಿಕ ನ್ಯಾಯ-ಸಮಾನತೆಯ ಕುರಿತು ಮಾತನಾಡುವ ಸಿಎಂ ವಿರುದ್ದ ಸಮಾಜದಲ್ಲಿ ಗಣ್ಯರೆಂದು ಬಿಂಬಿಸಿಕೊಂಡ ಸೋ-ಕಾಲ್ಡ್ ಬುದ್ಧಿಜೀವಿಗಳು ಸಾರ್ವಜನಿಕ ಹೇಳಿಕೆಗೆ ಸಿದ್ದರಿಲ್ಲದಿರುವುದು ಸಿದ್ಧರಾಮಯ್ಯನ ಮೋಡಿಯೋ? ಅಥವಾ ಕಾಯಾ-ವಾಚಾ-ಮನಸ್ಸಿನಿಂದ ತಮ್ಮ ಸರಕಾರ ನಡೆಸಲು ಅಲ್ಪಸಂಖ್ಯಾತರು ಅನಿವಾರ್ಯ ಎನ್ನುವ ಕೀಳು ಧೋರಣೆಯೇ? ಇದರಿಂದ ಹೈರಾಣಾಗುತ್ತಿರುವುದು ಮಾತ್ರ ಹಿಂದೂ ಸಮಾಜ.
ದೇರಳಕಟ್ಟೆ ಪ್ರಕರಣದ ವಿವರ:
ಡಿ.೧೮ ರಂದು ರಾತ್ರಿ ೧೧ ಗಂಟೆಗೆ ಮಂಗಳೂರು ತಾಲೂಕಿನ ದೇರಳಕಟ್ಟೆ ಶ್ರೀಅಯ್ಯಪ್ಪ ಭಜನಾ ಮಂದಿರದ ಬಳಿ ಕಾರಿನಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಸ್ನೇಹಿತ ಡಾಕ್ಟರ್ ಊಟಕ್ಕೆಂದು ತೆರಳಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಎಂಟು ಮಂದಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಗೈದು ವಿದ್ಯಾರ್ಥಿಯ ಕಾರನ್ನು ವಶಕ್ಕೆ ತೆಗೆದುಕೊಂಡು, ಅವರಿಬ್ಬರನ್ನೂ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಕಣ್ಣಿಗೆ ಬಟ್ಟೆ ಕಟ್ಟಿ, ಯಾವುದೋ ಒಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ವಾಸವಿಲ್ಲದ ಮನೆಯೊಂದರಲ್ಲಿ ಅಕ್ರಮವಾಗಿ ಬಂಧಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒತ್ತಾಯಿಸಿ, ಇದಕ್ಕೆ ವಿದ್ಯಾರ್ಥಿಗಳು ಒಪ್ಪದಿzಗ ಆರೋಪಿಗಳು ಅವರಿಗೆ ಹ ಮಾಡಿ ಜೀವ ಬೆದರಿಕೆ ಒಡ್ಡಿ ಬಲತ್ಕಾರದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡು, ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿದ್ದರು. ಆರೋಪಿಗಳು ಅವರಲ್ಲಿ ರೂ.೫೦ಲಕ್ಷ ಕೊಡಲು ಒತ್ತಾಯಿಸಿದ್ದು, ಇಲ್ಲವಾದಲ್ಲಿ ದೃಶ್ಯವನ್ನು ಅಂತಜಲ, ಸಾಮಾಜಿಕ ತಾಣ, ತಂದೆ ತಾಯಿ ಮತ್ತು ಕಾಲೇಜಿನ ಪ್ರಿನ್ಸಿಪಾಲ್‌ಗೆ ತಿಳಿಸಿ ಮರ್ಯಾದೆ ಹರಾಜು ಮಾಡುವುದಾಗಿ ಬೆದರಿಕೆ ಒಡ್ಡಿ ಅಮಾನವೀಯವಾಗಿ ವರ್ತಿಸಿದ್ದರು. ಆರೋಪಿಗಳ ಒತ್ತಡಕ್ಕೆ ಭಯಗೊಂಡ ವಿದ್ಯಾರ್ಥಿಗಳು ಮೂರು ಲಕ್ಷ ರೂ. ನೀಡಲು ಒಪ್ಪಿದ್ದರಿಂದ ಆರೋಪಿಗಳು ಅವರನ್ನು ಬೇರೆ ನಿರ್ಜನ ಗುಹೆ ಮಾದರಿಯ ಒಳ ಪ್ರದೇಶಕ್ಕೆ ಕರೆದೊಯ್ದು ಅಕ್ರಮವಾಗಿ ಬಂಧಿಸಿಟ್ಟಿದ್ದರು. ಡಿ.೨೦ರಂದು ಬೆಳಗ್ಗೆ ತೊಕ್ಕೊಟ್ಟು ಬಳಿ ವಿದ್ಯಾರ್ಥಿನಿಯನ್ನು ಬಿಟ್ಟು ಮಧ್ಯಾಹ್ನ ೧೨ ಗಂಟೆಯ ಒಳಗೆ ೩ ಲಕ್ಷ ರೂ. ಹಣ ತಂದು ಕೊಡದಿದ್ದರೆ ಗೆಳೆಯನನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಹೆದರಿದ ಹುಡುಗಿ ಹಣ ತರಲೆಂದು ಮನೆಗೆ ಬಂದಿದ್ದು, ಅಲ್ಲಿಂದ ಪರಿಚಯದ ವಕೀಲರೊಬ್ಬರನ್ನು ಸಂಪರ್ಕಿಸಿದ್ದಳು. ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಕಿಡ್ನಾಪ್ ಆದ ಹುಡುಗನ ಮೊಬೈಲ್‌ಗೆ ಕರೆ ಮಾಡಿ ಹಣ ನೀಡಲು ಎಲ್ಲಿಗೆ ಬರಬೇಕು ಎಂಬುದನ್ನು ಕೇಳಿ ಕಾರ್ಯಾಚರಣೆ ನಡೆಸಿದರು. ಆದರೆ ವಿದ್ಯಾರ್ಥಿನಿಯ ಗೆಳೆಯ ಎರಡು ಮಕ್ಕಳ ತಂದೆಯಾಗಿದ್ದು, ಆತನೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನುವುದಕ್ಕೆ ಪೂರಕವಾಗಿ ಆತ ದೂರು ದಾಖಲಿಸದಿರುವ ಕುರಿತು ಅನುಮಾನಗಳು ಹುಟ್ಟುತ್ತಿವೆ. ಒಟ್ಟಾರೆಯಾಗಿ ಗಮನಿಸಿದಾಗ ಇದೊಂದು ಪೂರ್ವ ನಿಯೋಜಿತ ಕೃತ್ಯವೆನ್ನುವುದು ಸ್ಪಷ್ಟ.
ಕಾಟಿಪಳ್ಳದ ಶಂಸುದ್ದೀನ್ ವೃತ್ತದ ಬಳಿ ಆರೋಪಿಯೊಬ್ಬನ ಮನೆಗೆ ದಾಳಿ ನಡೆಸಿ ಅಲ್ಲಿದ್ದ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದರು. ನಾಟೆಕಲ್ ಮಂಜನಾಡಿ ಮಂಗಳ ನಗರದ ನಿಸಾರ್ ಅಹಮದ್(೧೮) ಸುರತ್ಕಲ್ ಮುಕ್ಕಾ ಜುಮಾ ಮಸೀದಿ ಬಳಿಯ ನಿವಾಸಿ ಇಮ್ರಾನ್ ಅಲ್ತಾಫ್(೨೩), ನಾಟೆಕಲ್ ಸಹಾ ರೆಸಿಡೆನ್ಸಿಯ ಅರಾಫತ್(೧೮), ಕಾಟಿಪಳ್ಳ ಈದ್ಗಾದ ಸೆಕೆಂಡ್ ಬ್ಲಾಕ್ ನಿವಾಸಿ ಸಮೀರ್(೨೪), ಕೈರಂಗಳ ಫೌಜಿಯಾ ಕಂಪೌಂಡಿನ ನವಾಝ್(೨೧), ದೇರಳಕಟ್ಟೆ ಗ್ರೀನ್ ಗ್ರೌಂಡ್ ರೆಸಿಡೆನ್ಸಿಯ ಇಕ್ಬಾಲ್ ಆರಿಫ್(೨೧), ದೇರಳಕಟ್ಟೆ ಬೆಳ್ಮ ಕಾಣಕೆರೆಯ ಅಬ್ದುಲ್ ರವೂಫ್(೨೨) ಕೊಪ್ಪಳ ಹಳೆಯಂಗಡಿಯ ಹುಸೈನ್ ಯಾನೆ ಸಫ್ವಾನ್(೨೧) ಬಂಧಿತ ಆರೋಪಿಗಳು. ಇವರೆಲ್ಲಾ ಪೊಲೀಸರು ಬಂಧಿಸಲು ಬಂದಾಗ ಮಾರಾಕಾಸ್ತ್ರಗಳಿಂದ ಧಾಳಿ ಮಾಡಿದ್ದು ಮಾತ್ರವಲ್ಲದೇ, ಉದ್ದಟತನದಿಂದ ಮಾತನಾಡಿದ್ದರು.
ಇವರಿಗೆ ರಾಜ್ಯದಲ್ಲಿರುವುದು ತಮ್ಮದೇ ಸರಕಾರವೆನ್ನುವ ಗಾಢ ಗರ್ವ ಹೆಚ್ಚಿದಂತಿದೆ ಎನ್ನುವುದು ಜನಸಾಮಾನ್ಯರ ಅಂಬೋಣ. ಆರೋಪಿಗಳ ಮಾತಿನಲ್ಲಿ ಕಾನೂನು ಪಾಲಕರು ಪೊಲೀಸರು ಆರೋಪಿಗಳನ್ನು ಬಂಧಿಸದೆ ರಕ್ಷಣೆ ಮಾಡಬೇಕು ಎನ್ನುವ ಸಂದೇಶ ಸಮಾಜಕ್ಕೆ ನೀಡಿದಂತಿಲ್ಲವೇ? ನಿಷ್ಠಾವಂತ ಪೊಲೀಸ್ ಅಧಿಕಾರಿಯೊರ್ವ ತನ್ನ ಸ್ವಾಭಿಮಾನ, ಹೆಣ್ಣಿನ ಮಾನ, ದೇಶ ರಕ್ಷಣೆ, ಆತ್ಮರಕ್ಷಣೆಗಾಗಿ ನೀಚ ಕೃತ್ಯವನ್ನೆಸಗಿದ ಆರೋಪಿಗಳನ್ನು ಗುಂಡಿಟ್ಟು ಕೊಲ್ಲುವಂತ ಪರಿಸ್ಥಿತಿಯಿದ್ದರೂ, ನಿಯಂತ್ರಿಸಿಕೊಂಡು ಅವರನ್ನು ರಕ್ಷಣೆ ಮಾಡುತ್ತಾರೆ ಎಂದಾಗ ಇವರ ಮೇಲೆ ಸರಕಾರದ ಒತ್ತಡ ಯಾವ ರೀತಿಯಾಗಿದೆ ಎನ್ನುವುದು ತಿಳಿಯುತ್ತದೆ. ಆಂದ್ರದ ಜನಪ್ರತಿನಿಧಿ ಓವೈಸಿ ಎನ್ನುವ ಮತಾಂಧ ಮುಸಲ್ಮಾನನೊರ್ವ ``ದೇಶದಲ್ಲಿರುವ ಪೊಲೀಸರು, ಸೈನಿಕರೆಲ್ಲಾ ನಪುಂಸಕರು. ೧೫ ನಿಮಿಷ ಕಾಲಾವಕಾಶ ಕೊಟ್ಟರೆ ೧೦೦ಕೋಟಿ ಹಿಂದುಗಳನ್ನು ನೋಡಿಕೊಳ್ಳುತ್ತೇವೆ" ಎಂದು ಹೇಳಿ ವಾರ ಕಳೆದು ಬಂಧಿಸಿದ ಅಲ್ಲಿನ ಕಾಂಗ್ರೆಸ್ ಸರಕಾರವು ಮುಸ್ಲಿಂರ ಕುರಿತು ಒಲವನ್ನು ಸೂಚಿಸುತ್ತದೆ. ಅದೇ ರೀತಿ ದೇರಳ ಕಟ್ಟೆಯ ಪ್ರಕರಣದಲ್ಲಿಯೂ ಆಮೆಗತಿಯ ತನಿಖೆಯಿಂದ ಸರಕಾರ ಇವರಿಗಾಗಿಯೇ ಕಾರ್ಯತತ್ಪರವಾಗಿದೆ ಎನ್ನುವ ಸತ್ಯ ಅನಕ್ಷರಸ್ತನಿಗೂ ತಿಳಿಯುತ್ತದೆ. ಜಾತ್ಯಾತೀತ ಪ್ರಜಾಪ್ರಭುತ್ವದೇಶದಲ್ಲಿ ಬಹುಸಂಖ್ಯಾತ ಹಿಂದುಗಳಿಗೆ ಅನ್ಯಾಯವಾಗುತ್ತಿದ್ದರೂ, ಕಣ್ಣಿದ್ದು ಕುರುಡರಾಗಿ, ಬಾಯಿದ್ದು ಮೂಕರಾಗಿ, ಧೈರ್ಯವಿದ್ದು ಹೋರಾಟ ಮಾಡದಿರುವಂತ ಪರಿಸ್ಥಿತಿಗೆ ದೇಶದ ಕಾನೂನು ರೂಪುಗೊಳಿಸುವ ಹುನ್ನಾರವಾಗುತ್ತಿದೆ.
ದೇರಳಕಟ್ಟೆ ಪ್ರಕರಣದಲ್ಲಿ ಸಂತ್ರಸ್ತೆ ಮುಸಲ್ಮಾನ ಹುಡುಗಿಯಾಗಿ, ಆರೋಪಿಗಳು ಹಿಂದುಗಳಾಗಿದ್ದರೆ ಪರಿಸ್ಥಿತಿ ಹೇಗಿರುತಿತ್ತು ಎಂದು ಊಹಿಸಲು ಸಾಧ್ಯವೇ? ಮಣಿಪಾಲದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಮಾರ್ನಿಂಗ್ ಮಿಸ್ಟ್ ಹೋಮ್‌ಸ್ಟೇ ಪ್ರಕರಣ, ಪಬ್ ದಾಳಿ, ದೆಹಲಿಯ ನಿರ್ಭಯಾ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿರುವುದು ಹಿಂದು ಯುವಕರು. ಹಿಂದುಗಳು ಗಟ್ಟಿಯಾಗಿ ಕೆಮ್ಮಿದರೂ, ದೊಡ್ಡ ಪ್ರಮಾದವಾಯಿತು ಎನ್ನುವಂತೆ ಗುಲ್ಲೆಬ್ಬಿಸುವ ತಥಾಕಥಿತ ಕಮ್ಯೂನಿಸ್ಟ್‌ರು, ವಿಚಾರವಾದಿಗಳು, ಎಡಪಂಥಿಯ ಮಾಧ್ಯಮಗಳು ದೇರಳ ಕಟ್ಟೆ ಪ್ರಕರಣದಲ್ಲಿ ಇವರ ಸೊಲ್ಲಿಲ್ಲ. ವಿಟ್ಲದ ಸಂಜೆ ಪತ್ರಿಕೆ ವರದಿಗಾರನ ಮೇಲೆ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಹಲ್ಲೆ ಮಾಡಿದಾಗ ವಿ.ಟಿ.ಪ್ರಸಾದ ಹಿಂದುವಾದರೂ, ಎಡಪಂಥಿಯ ಎನ್ನುವ ನೆಲೆಯಲ್ಲಿ ರಕ್ಷಣೆಗೆ ಬಂದಿದ್ದವರೂ ಈಗ ಮೌನವೃತ ತಾಳಿದ್ದಾರೆ. ಹೋಮ್‌ಸ್ಟೇ ದಾಳಿಯಲ್ಲಿ ವ್ಯವಸ್ಥಿತ ಪಿತೂರಿ ನಡೆಸಿ ಅದನ್ನು ಚಿತ್ರಿಕರಿಸಿ, ಮಾಧ್ಯಮ ಕಾನೂನನ್ನು ಮೀರಿ ಟಿಆರ್‌ಪಿ ಹೆಚ್ಚಳಕ್ಕೆ ದೃಶ್ಯ ವೈಭವೀಕರಿಸಿ ಬಿತ್ತರಿಸಿದ ಎಡಪಂಥೀಯ ನವೀನ್ ಸೂರಿಂಜೆ, ದಾಳಿ ನಡೆಸಿದ ಹಿಂದು ಯುವಕರನ್ನು ನಮ್ಮ ಕೈಗೆ ಕೊಡಿ ಎಂದು ಬೊಬ್ಬಿಟ್ಟ ಮಹಿಳಾ ಸಂಘಟನೆ, ಕೆಲವು ವಿದ್ಯಾಸಂಸ್ಥೆಗಳು ದೇರಳಕಟ್ಟೆಯ ವಿಷಯದಲ್ಲಿ ಮೌನಮುದ್ರೆ ತಾಳಿದ್ದಾದರೂ ಯಾಕೆ? ಭವಿಷ್ಯದಲ್ಲಿ ಕೆಟ್ಟದ್ದು ಉಂಟೆಂದು ಯೋಚಿಸಲು ಆಗದ ಘಟನೆ ನಡೆಸಿದ ಆರೋಪಿಗಳೆಲ್ಲಾ ಮತಾಂಧ ಮುಸ್ಲಿಂರಾಗಿದ್ದರಿಂದ ಇವರ ವಿರುದ್ದ ಮಾತನಾಡಿದರೆ ಜೀವಕ್ಕೆ ಅಪಾಯವಿದೆ ಎನ್ನುವ ಹೆದರಿಕೆ ಹುಟ್ಟಿರಬಹುದೆ? ಅಥವಾ ಸ್ವಾಭಿಮಾನಕ್ಕೆ ಕಿಚ್ಚು ಹಚ್ಚಿ, ಹಿಂದುಗಳ ತಪ್ಪಿದ್ದಾಗ ಮಾತ್ರ ಹೋರಾಟವೆನ್ನುವ ಮಿಷನರಿ, ಜಿಹಾದ್‌ಗಳ ತಂತ್ರವೇ? ಘಟನೆಯ ತುಲನೆ ಮಾಡಿದಾಗ ಆರೋಪಿಗಳು ಹಿಂದುಗಳಾದರೆ ಮಾತ್ರ ಈ ಹೋರಾಟ, ಮಾಧ್ಯಮಗಳ ವೈಭವಿಕರಣವೆನ್ನುವ ಸತ್ಯವನ್ನು ಹಿಂದುಗಳು ಅರಿಯಬೇಕಿದೆ. ಎಡಪಂಥಿಯರ ಹೋರಾಟದ ಗುಲ್ಲಿನ ನಡುವೆ ಹಿಂದುಗಳ ಶಕ್ತಿಯನ್ನು ಕ್ಷೀಣಿಸುವ ಪರಿ, ಮತಾಂಧ ಅಲ್ಪಸಂಖ್ಯಾತರು ಮಾಡಿದ ತಪ್ಪನ್ನು ಸರಿಯೆನ್ನುವುದಾಗಿ ಬಿಂಬಿಸುತ್ತಿರುವ ಮಾಧ್ಯಮಗಳು ಆರೋಪಿ ಹಿಂದುವಾದರೆ ಮಾತ್ರ ಎಡಪಂಥಿಯರು, ವಿಚಾರವಾದಿಗಳ ರಾಕ್ಷಸೀಗುಣ ಪ್ರವೃತ್ತಗೊಳ್ಳುತ್ತದೆ. ಕಾರಣ ಆರೋಪಿ ಸ್ಥಾನದಲ್ಲಿರುವುದು ಹಿಂದುಗಳು!
ಆರೋಪಿಗಳು ಹಿಂದುಗಳಾಗಿದ್ದರೆ ಕಮ್ಯೂನಿಷ್ಟ್‌ಗಳು, ವಿಚಾರವಾದಿಗಳು ಹಾಗೂ ಸಮಾಜದಲ್ಲಿ ಸಭ್ಯರೆನಿಸಿದವರೂ ದೃಶ್ಯ ಮಾಧ್ಯಮದೊಂದಿಗೆ ದೊಡ್ಡ ಸ್ವರದೊಂದಿಗೆ ಹೇಳಿಕೆ ನೀಡುತ್ತಾರೆ. ಆದರೆ ದೇರಳ ಕಟ್ಟೆ ಪ್ರಕರಣದ ನಂತರ ಅವರ ಸ್ವರ ಯಾಕಿಲ್ಲ? ಈಗ  ಆ ಸಭ್ಯರೆಲ್ಲಿ? ಮಾಧ್ಯಮದವರೆಲ್ಲಿ? ಹಿಂದು ಆರೋಪಿ ಕೋಪದ ಭರದಲ್ಲಿ ತಪ್ಪು ಮಾಡಿ, ಅಪರಾಧಿ ಪ್ರಜ್ಞೆ ಕಾಡಿ ಪಶ್ಚಾತ್ತಾಪ ಪಡುತ್ತಿರುವಾಗಲೇ, ಸಭ್ಯತೆಯ ಸೋಗಿನಲ್ಲಿರುವ ನಾಯಕರು ನಾಲಗೆಯನ್ನು ಚಪ್ಪಲಿಯಂತೆ ಬಳಸುತ್ತಿದ್ದಾರೆ. ಈ ಎಲ್ಲಾ ಕಾರಣಗಳೆ ಮುಸಲ್ಮಾನರನ್ನು ಪ್ರಚೋದಿಸುತ್ತಿವೆ. ತಾವು ಏನು ಮಾಡಿದರೂ ನಡೆಯುತ್ತದೆ ಎನ್ನುವ ನೆಲೆಯಲ್ಲಿ ದೇಶ-ವಿರೋಧಿಗಳನ್ನು ಮೆಚ್ಚಿಸುವ ಕೆಲಸಕ್ಕೆ ಕೈಹಾಕಿರುವುದಂತು ಸ್ಪಷ್ಟ.
ಇದುವರೆಗೆ ಯಾವುದೇ ಮುಸಲ್ಮಾನ ಮುಖಂಡ ಹಿಂದು ಸಂತ್ರಸ್ತೆಯ ಕುರಿತು ಮಾತನಾಡಿಲ್ಲ. ಮುಸ್ಲಿಂ ಆರೋಪಿಗಳ ವಿರುದ್ದವೂ ಮಾತನಾಡಿಲ್ಲ. ಇವರನ್ನು ಹಿಂದು ಸಮಾಜ ನಂಬುವುದು ಹೇಗೆ? ಮಲ್ಲೂರಿನ ಮರಣದ ಮನೆಯಲ್ಲಿ ದುಃಖತಪ್ತರಾಗಿದ್ದ ವೇಳೆ ಹೋಗಿ ಗಲಾಟೆ ಮಾಡಿ, ರಕ್ತಕ್ರಾಂತಿಗೆ ಕಾರಣವಾಗುವ ಮತಾಂಧರು ಮಾನವೀಯತೆ ಇಲ್ಲದಂತೆ ವರ್ತಿಸುತ್ತಾರೆ. ಶೇ.೮೦ರಷ್ಟು ಮುಸ್ಲಿಂರು ನಮ್ಮ ಅಕ್ಕ-ತಂಗಿಯನ್ನು ಕಾಮದ ವಸ್ತುವಾಗಿಯೇ ನೋಡುವ ಪರಿಸ್ಥಿತಿ ಕಣ್ಣಮುಂದಿದೆ. ಇಂತಹ ಮಾನಸಿಕತೆಯನ್ನು ಒಪ್ಪಿಕೊಳ್ಳುವ ಸರಕಾರದಿಂದ ದೇಶದ ಪರಿಸ್ಥಿತಿ ಬಿಗಡಾಯಿಸುತ್ತದೆ.
ಅಪರಾಧಿಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸದೆ, ಸಾಮಾನ್ಯ ನ್ಯಾಯ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಹಿಂದುಗಳು ತಪ್ಪು ಮಾಡದಿದ್ದರೂ ಅದು ಘೋರ ತಪ್ಪು. ನೀಚ ಕೆಲಸವನ್ನು ಮಾಡುವ ಮುಸಲ್ಮಾನ ಏನು ಮಾಡಿದರೂ ತಪ್ಪಲ್ಲವೆನ್ನುವ ಇಬ್ಬಗೆಯ ನೀತಿಯಿಂದ ಮುಕ್ತಿ ಸಿಗಬೇಕು. ಹಿಂದು ಆರೋಪಿಗಳ ವಿರುದ್ದ ಮಾತನಾಡುವ ಸಭ್ಯರು ಮುಸಲ್ಮಾನ ಆರೋಪಿಗಳ ವಿರುದ್ಧ ಸ್ವರ ಎತ್ತದಿದ್ದಲ್ಲಿ ನಮ್ಮ ದೇಶವನ್ನು ಇನ್ನೊಂದು ಮತಾಂಧ ರಾಷ್ಟ್ರವನ್ನಾಗಿ ಮಾಡಲು ಎಡೆಮಾಡಿದಂತಾಗುತ್ತದೆ. ಹಿಂದು ಸಮಾಜದ ರಕ್ಷಣೆಗಾಗಿ ರಾಜಕೀಯ ರಹಿತವಾಗಿ ದೇಶದ ಜನತೆ ಮುಂದುವರಿಯಬೇಕಾದ ಅವಶ್ಯಕತೆಯಿದೆ. ಇಲ್ಲದಿದ್ದರೆ ಮುಂದೊಂದು ದಿನ ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಹಿಂದೂಗಳೇ ಈ ಕುರಿತು ಎಚ್ಚರ ಅಗತ್ಯವಲ್ಲವೇ..ಏನಂತಿರಾ.



No comments:

Post a Comment